Advertisement

ಅನಾಥ ಮಕ್ಕಳೊಂದಿಗೆ ಸಿಇಒ ಮಾನಕರ ದೀಪಾವಳಿ

11:43 AM Oct 30, 2019 | Suhan S |

ಬಾಗಲಕೋಟೆ: ಇಲ್ಲಿನ ಜಿಪಂ ಸಿಇಒ ಗಂಗೂಬಾಯಿ ಮಾನಕರ ತಮ್ಮ ಸರ್ಕಾರಿ ನಿವಾಸದಲ್ಲಿ ಅನಾಥ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.

Advertisement

ನವನಗರದ ಸರ್ಕಾರಿ ಬಾಲಕಿಯರ ಹಾಗೂ ಬಾಲಕಿಯರ ಬಾಲ ಮಂದಿರದ ಮಕ್ಕಳನ್ನು ತಮ್ಮ ನಿವಾಸಕ್ಕೆ ಕರೆಸಿ, ಅನಾಥ ಮಕ್ಕಳು ಹಬ್ಬದ ಸಂಭ್ರಮ ಸವಿಯುವಂತೆ ಮಾಡಿದರು. ಬಾಲ ಮಂದಿರದ ಎಲ್ಲ ಮಕ್ಕಳಿಗೆ ಹೊಸ ಬಟ್ಟೆ ನೀಡಿ, ಮಕ್ಕಳ ಕೈಯಿಂದಲೇ ದೀಪ ಬೆಳಗಿಸಿದರು. ಬಳಿಕ ಮಕ್ಕಳಿಗೆ ಸಿಹಿ ಊಟ ಮಾಡಿಸಿದರು. ಮಾನಕರ ಅವರ ಈ ದೀಪಾವಳಿ ಹಬ್ಬದ ಆಚರಣೆಗೆ ಎಲ್ಲ ಮಕ್ಕಳು ಸಂಭ್ರಮಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next