Advertisement

ಕೇಂದ್ರ ಬಜೆಟ್‌ನಲ್ಲಿ ರೈತ ಬಂಧು ಯೋಜನೆ ಅನುಕರಣೆ: ಟಿಆರ್‌ಎಸ್‌ ಟೀಕೆ

10:21 AM Feb 01, 2019 | Team Udayavani |

ಹೈದರಾಬಾದ್‌ : ಕೇಂದ್ರ ಸರಕಾರ ಇಂದು ಲೋಕಸಭೆಯಲ್ಲಿ ಮಂಡಿಸಿರುವ ಮಧ್ಯಾವಧಿ ಬಜೆಟ್‌ನಲ್ಲಿ ರೈತರಿಗೆ ನಗದು ಹಣ ಕೊಡುವ ಯೋಜನೆಯು ತನ್ನ ಸರಕಾರದ ರೈತ ಬಂಧು ಯೋಜನೆಯನ್ನು ಸಣ್ಣ ತಿದ್ದುಪಡಿಯೊಂದಿಗೆ ಮಾಡಿರುವ ಅನುಕರಣೆಯಾಗಿದೆ ಎಂದು ಆಳುವ ಟಿಆರ್‌ಎಸ್‌ ಸರಕಾರ ಹೇಳಿಕೊಂಡಿದೆ.

Advertisement

ಆರ್ಥಿಕತೆಗಿಂತ ರಾಜಕೀಯವೇ ಪ್ರಾಧಾನ್ಯ ಪಡೆದಿರುವ ಈ ಬಜೆಟ್‌, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಮತಗಳನ್ನು ತಂದುಕೊಡಲಾರದು ಎಂದು ಟಿಆರ್‌ಎಸ್‌ ಸರಕಾರ ಹೇಳಿದೆ. 

ಸಾಮಾನ್ಯವಾಗಿ ಹೇಳಲಾಗುವಂತೆ ಅನುಕರಣೆಯೇ ಅತ್ಯುತ್ತಮ ನಮೂನೆಯ ಹೊಗಳಿಕೆ ಯಾಗಿದೆ ಎಂದು ಮುಖ್ಯಮಂತ್ರಿ ಕೆಸಿಆರ್‌ ಪುತ್ರ, ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ ಟಿ ರಾಮ ರಾವ್‌ ಕೇಂದ್ರ ಬಜೆಟ್‌ಗೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next