Advertisement

ಆಧಾರ್‌ ಜೋಡಣೆ: ಮಾ.31ರ ವರೆಗೆ ಗಡುವು ವಿಸ್ತರಣೆ: ಕೇಂದ್ರ

11:57 AM Dec 07, 2017 | Team Udayavani |

ಹೊಸದಿಲ್ಲಿ : ಸರಕಾರದ ಅನೇಕ ಸೇವೆಗಳು ಮತ್ತು ವಿವಿಧ ಜನಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುವುದಕ್ಕೆ ಕಡ್ಡಾಯಗೊಳಿಸಲಾಗಿರುವ ಆಧಾರ್‌ ಕಾರ್ಡ್‌ ಜೋಡಣೆಯ ಗಡುವನ್ನು ಮಾರ್ಚ್‌ 31ರ ವರೆಗೆ ವಿಸ್ತರಿಸಲು ತಾನು ಬಯಸಿರುವುದಾಗಿ ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟಿಗೆ ಹೇಳತು.

Advertisement

ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ ಮುಂದಿನ ವಾರ ಐವರು ನ್ಯಾಯಾಧೀಶರುಗಳ ಸಂವಿಧಾನ ಪೀಠವನ್ನು ರಚಿಸಲಿದೆ. 

ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್‌ ದೀಪಕ್‌ ಮಿಶ್ರಾ ನೇತೃತ್ವದ ಪೀಠಕ್ಕೆ ಇಂದು ಕೇಂದ್ರ ಸರಕಾರದ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಸರಕಾರದ ವಿವಿಧ ಸೇವೆ ಮತ್ತು ಜನಕಲ್ಯಾಣ ಯೋಜನೆಗಳ ಲಾಭ ಪಡೆಯಲು ಆಧಾರ್‌ ಜೋಡಿಸುವ ಗಡುವನ್ನು ಸರಕಾರ ಮುಂದಿನ ವರ್ಷ ಮಾರ್ಚ್‌ 31ರ ವರೆಗೆ ವಿಸ್ತರಿಸಲು ಬಯಸಿದೆ ಎಂದು ತಿಳಿಸಿದರು. 

ಮೊಬೈಲ್‌ ಸೇವೆಗಳಿಗೆ ಆಧಾರ ಜೋಡಣೆ ಕಡ್ಡಾಯ ಮಾಡಿರುವುದನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಅನುಮೋದಿಸಿರುವ ಕಾರಣ ಅದರ ಅಂತಿಮ ಗಡುವು ಫೆ.6 ಆಗಿರುತ್ತದೆ ಎಂದು ಅಟಾರ್ನಿ ಜನರಲ್‌ ಕೋರ್ಟಿಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next