Advertisement

ಎಲ್‌ಪಿಜಿ ಮಾರಾಟ: ತೈಲ ಕಂಪೆ‌ನಿಗಳಿಗೆ 22 ಸಾವಿರ ಕೋಟಿ ರೂಪಾಯಿ ಪರಿಹಾರ

12:42 AM Oct 13, 2022 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ ಮಾರಾಟದಿಂದ ಉಂಟಾದ ನಷ್ಟ ಭರಿಸುವ ನಿಟ್ಟಿನಲ್ಲಿ ಏಕಕಂತಿನಲ್ಲಿ 22 ಸಾವಿರ ಕೋಟಿ ರೂ. ಪರಿಹಾರ ನೀಡಲಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

Advertisement

ಕಳೆದ ಎರಡು ವರ್ಷಗಳಲ್ಲಿ ನಿಗದಿತ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಮಾರಾಟ ಮಾಡಿ ನಷ್ಟ ಉಂಟಾಗಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲು ಕೇಂದ್ರ ಸಚಿವ ಸಂಪುಟ ಒಪ್ಪಿದೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇ ಶ‌ನ್‌(ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿ.(ಬಿಪಿಸಿಎಲ್‌) ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿ.(ಎಚ್‌ಪಿಸಿಎಲ್‌) ಕಂಪೆ‌ನಿಗಳಿಗೆ ಈ ಸೌಲಭ್ಯ ಸಿಗಲಿದೆ.

2020ರ ಜೂನ್‌ನಿಂದ 2022ರ ಜೂನ್‌ ತಿಂಗಳೊಳಗೆ ಎಲ್‌ಪಿಸಿ ಸಿಲಿಂಡರ್‌ಗಳ ಬೆಲೆ ಬರೋಬ್ಬರಿ ಶೇ.300ರಷ್ಟು ಏರಿತ್ತು. ಆದರೆ ಸರಕಾರ ನಿಗದಿ ಪಡಿಸಿದ ದರದಲ್ಲಿ ಸಿಲಿಂಡರ್‌ ಮಾರಾಟ ಮಾಡಿದ ಈ ಮೂರೂ ಕಂಪೆನಿಗಳು ಸಿಲಿಂಡರ್‌ ಬೆಲೆಯಲ್ಲಿ ಕೇವಲ ಶೇ.72 ಏರಿಸಿವೆ. ಹಾಗಾಗಿ ಕಂಪೆನಿಗಳಿಗೆ ನಷ್ಟ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next