Advertisement

ಕೂಚ್ ಬೆಹಾರ್ ಹಿಂಸಾಚಾರಕ್ಕೆ ದೀದಿ ಕಾರಣ : ಕೇಂದ್ರ ಸಚಿವ ಅಮಿತ್ ಶಾ

07:11 PM Apr 11, 2021 | Team Udayavani |

ಕೋಲ್ಕತ್ತಾ : ಕೂಚ್ ಬೆಹಾರ್ ನಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ತಿರಗೇಟು ನೀಡಿದ್ದಾರೆ.

Advertisement

ಇಂದು ( ಏಪ್ರಿಲ್ 11) ಚುನಾವಣಾ ಜಾಥಾದಲ್ಲಿ ದೀದಿ ವಿರುದ್ಧ ಗುಡುಗಿರುವ ಶಾ, ಕೇಂದ್ರ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಕೂಚ್ ಬೆಹಾರ್ ನಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದರು. ಅಲ್ಲಿನ ಯುವಕ ಹಾಗೂ ಮಹಿಳೆಯರಿಗೆ ಕೇಂದ್ರ ಪಡೆಗಳಿಗೆ ಘೇರಾವ್ ಹಾಕುವಂತೆ ಕರೆ ನೀಡಿದ್ದರು. ‘ನೀವು ( ದೀದಿ) ಈ ರೀತಿ ಹೇಳಿ ವ್ಹೀಲ್ ಚೇರ್ ಮೇಲೆ ಕುಳಿತು ಅಲ್ಲಿಂದ ತೆರಳಿದಿರಿ. ಆದರೆ, ನಿಮ್ಮಿಂದಿದಾಗಿ ನಾಲ್ಕು ಜನರು ಪ್ರಾಣ ಕಳೆದುಕೊಳ್ಳುವಂತಾಯಿತು. ಅದೇ ದಿನ ಮುಂಜಾನೆ ಬಿಜೆಪಿ ಕಾರ್ಯಕರ್ತ ಕೂಡ ಸಾವನ್ನಪ್ಪಿದ’ ಎಂದು ಅಮಿತ್ ಶಾ ಕಿಡಿ ಕಾರಿದ್ದಾರೆ.

ಕೂಚ್ ಬೆಹಾರ್ ಘಟನೆ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿರುವ ಅಮಿತ್ ಶಾ, ದೀದಿ ಪದೇ-ಪದೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಜನರು ಯಾವಾಗ ಬಯಸುತ್ತಾರೋ ಅವತ್ತು ನಾನು ರಾಜೀನಾಮೆ ನೀಡುತ್ತೇನೆ. ಆದರೆ,ನೀವು (ದೀದಿ) ಮೇ 2 ರಂದು ರಾಜೀನಾಮೆ ನೀಡಲು ಇವಾಗಿನಿಂದಲೇ ತಯಾರಿ ನಡೆಸಿ ಎಂದು ಕುಟುಕಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ದೀದಿ ವಿರುದ್ಧ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಭಾರತೀಯ ಜನತಾ ಪಕ್ಷಕ್ಕೆ ಎಲ್ಲರೂ ಮತ ನೀಡುವಂತೆ ಕೋರಿದ್ದಾರೆ. ದೀದಿ ಕಳೆದ 10 ವರ್ಷಗಳಿಂದ ರಾಜ್ಯಭಾರ ಮಾಡಿದ್ದಾರೆ.ಅವರಿಗೆ ಒಂದು ಸಣ್ಣ ಬಿಳ್ಕೋಡುಗೆ ಬೇಡವೆ? ಆದ್ದರಿಂದ ನೀವು ಬಿಜೆಪಿಯ 200 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮಮತಾ ಅವರನ್ನು ಮನೆಗೆ ಕಳುಹಿಸಿ ಎಂದು ಮತದಾರರಿಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next