Advertisement

Central Govt: ತಾಂತ್ರಿಕ ಕಾರಣ; ಜಾನುವಾರು ಗಣತಿ ಪ್ರಕ್ರಿಯೆ ಸ್ಥಗಿತ

12:34 AM Sep 26, 2024 | Team Udayavani |

ಉಡುಪಿ: ದೇಶಾದ್ಯಂತ ಐದು ವರ್ಷಕ್ಕೊಮ್ಮೆ ನಡೆಯುವ ಜಾನುವಾರು ಗಣತಿ ಯೋಜನೆ ಪ್ರಕ್ರಿಯೆ ಅರಂಭಕ್ಕೆ ವಿಘ್ನ ಎದುರಾಗಿದೆ. 21ನೇ ಜಾನುವಾರು ಗಣತಿ ಸೆ.1ಕ್ಕೆ ದೇಶಾದ್ಯಂತ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಕೇಂದ್ರ ಸರಕಾರ ಗಣತಿ ಪ್ರಕ್ರಿಯೆಯನ್ನು ಮುಂದೂಡಿದೆ.

Advertisement

ಕೇಂದ್ರ ಪಶುಸಂಗೋಪನ ಇಲಾಖೆ ಗಣತಿ ಕಾರ್ಯಕ್ಕೆಂದೇ “21ಸ್ಟ್‌ ಲೈವ್‌ಸ್ಟಾಕ್‌ ಸೆನ್ಸಸ್‌’ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿತ್ತು. ಕರ್ನಾಟಕ ಸಹಿತ ಕೆಲವು ರಾಜ್ಯಗಳು ಗಣತಿಗೆ ಸಿದ್ಧತೆ ಮಾಡಿಕೊಂಡಿದ್ದವು. ಆದರೆ ಕೆಲವು ರಾಜ್ಯಗಳು ಸಿದ್ಧತೆ ಮಾಡಿಕೊಂಡಿಲ್ಲ. ಅಲ್ಲದೆ ಆ್ಯಪ್‌ನ ಸಾಫ್ಟವೇರ್‌ನಲ್ಲೂ ಕೆಲವು ಮಾರ್ಪಾಡು ಮಾಡಬೇಕಿದೆ. ಜತೆಗೆ ಕೆಲವು ರಾಜ್ಯಗಳಲ್ಲಿ ಚುನಾವಣೆ ನೀತಿ ಸಂಹಿತೆ ಎದುರಾಗಿದ್ದರಿಂದ ಏಕಕಾಲದಲ್ಲಿ ಗಣತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಜಿಲ್ಲೆಯಲ್ಲಿ 95 ಗಣತಿಕಾರರು ಹಾಗೂ 23 ಸೂಪರ್‌ವೈಸರ್‌ಗಳಿಗೆ ತರಬೇತಿ ನೀಡಲಾಗಿತ್ತು. ಅಭಿವೃದ್ಧಿಪಡಿಸಿರುವ ಸಾಫ್ಟವೇರ್‌ನಲ್ಲಿ ಹೆಚ್ಚುವರಿ ಮಾರ್ಪಾಡು ಮಾಡುವ ಉದ್ದೇಶದಿಂದ ಗಣತಿಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ| ರೆಡ್ಡಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next