Advertisement

ಕೇಂದ್ರ ಸೇನೆ, ಪೊಲೀಸ್‌ ಭದ್ರತೆಗೆ ಮುಕ್ತ ಪ್ರಶಂಸೆ‌

10:57 PM May 24, 2019 | Team Udayavani |

ಕಾಸರಗೋಡು: ಕಾಸರಗೋಡು ಲೋಕಸಭೆಯ ಮತಗಣನೆ ಕೇಂದ್ರವಾಗಿದ್ದ ಪಡನ್ನಕ್ಕಾಡ್‌ ನೆಹರೂ ಆರ್ಟ್ಸ್ ಮತ್ತು ಸಯನ್ಸ್‌ ಕಾಲೇಜಿನಲ್ಲಿ ವ್ಯವಸ್ಥಿತ ಸುರಕ್ಷೆ ಒದಗಿಸುವ ಮೂಲಕ ಕೇಂದ್ರ ಸೇನೆ ಮತ್ತು ಕೇರಳ ಪೊಲೀಸ್‌ ಪಡೆ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಡಿ.ವೈ.ಎಸ್‌ಪಿ. ಶ್ರೇಣಿಯ ಇಬ್ಬರು ಅಧಿಕಾರಿಗಳ ಮೇಲ್ನೋಟದಲ್ಲಿ ಬೇರೆ ಬೇರೆ ಸುರಕ್ಷೆಯ ಕ್ರಮಗಳನ್ನು ಇಲ್ಲಿ ಏರ್ಪಡಿಸಲಾಗಿತ್ತು. ಇದಕ್ಕಾಗಿ ಅನೇಕ ಪೊಲೀಸ್‌ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು.

ಜತೆಗೆ 85 ಕೇಂದ್ರ ಸೇನೆಯ ಸದಸ್ಯರು ಆಯುಧ ಸಹಿತ ಕರ್ತವ್ಯದಲ್ಲಿದ್ದರು. ಚುನಾವಣೆಗೆ 25 ದಿನಗಳ ಮುನ್ನವೇ ಈ ಯೋಧರು ಜಿಲ್ಲೆಗೆ ಆಗಮಿಸಿ ಕರ್ತವ್ಯ ಆರಂಭಿಸಿದ್ದರು. ಮತದಾನ ಕಳೆದ ನಂತರ ಪಡನ್ನಕ್ಕಾಡ್‌ ಕಾಲೇಜಿನ ಸ್ಟಾÅಂಗ್‌ ರೂಂನ ಭದ್ರತೆಯ ಹೊಣೆಯನ್ನೂ ಇವರು ಹೊತ್ತಿದ್ದರು. ಪ್ರತಿ ಯೋಧನೂ 24 ತಾಸುಗಳ ಕಾವಲು ನಡೆಸಿದ್ದಾರೆ. ಪೆಟ್ರೋಲಿಂಗ್‌ ಕೂಡ ಇವರು ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next