Advertisement

ಹೆದ್ದಾರಿ ಟೆಂಡರ್‌ನಲ್ಲಿ ಕೇಂದ್ರ ಶೇ.25 ಕಮಿಷನ್‌

06:45 AM May 11, 2018 | |

ವಿಜಯಪುರ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಟೆಂಡರ್‌ಗಳಲ್ಲಿ ಶೇ.25ರಷ್ಟು ಕಮಿಷನ್‌ ದಂಧೆ ನಡೆಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್‌ ಸರ್ಕಾರವನ್ನು ಕಮಿಷನ್‌ ಸರ್ಕಾರ ಎಂದು ಜರಿಯುವ ಮೊದಲು ತಮ್ಮ ಸರ್ಕಾರದ ಭ್ರಷ್ಟಾಚಾರದ ಕುರಿತು ಬಾಯಿ ಬಿಡಲಿ ಎಂದು ಸವಾಲು ಹಾಕಿದರು.

2023ರಲ್ಲಿ ನಾನೇ ಮುಖ್ಯಮಂತ್ರಿ,
ಮುಂದೆ ನಾನೇ ಪ್ರಧಾನಿ!

ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ 130ರಿಂದ 140 ಸೀಟುಗಳನ್ನು ಗೆಲ್ಲುವುದು ಖಚಿತ. ಸಿದ್ದರಾಮಯ್ಯ ಸರ್ಕಾರದ
ಜನಪರ ಯೋಜನೆಗಳ ಅನುಷ್ಠಾನವೇ ಇದಕ್ಕೆ ಕಾರಣ. ಹೀಗಾಗಿ,ಮತ್ತೂಮ್ಮೆ ಸಿದ್ದರಾಮಯ್ಯ ಸಿಎಂ ಆಗಲಿದ್ದು, 2023ರಲ್ಲಿ ನಾನು ಸಿಎಂ ಹುದ್ದೆ ಆಕಾಂಕ್ಷಿ, ಪ್ರಧಾನಿ ಆಗುವುದು ಕೂಡ ನನ್ನ ಕನಸು.
– ಎಂ.ಬಿ.ಪಾಟೀಲ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next