Advertisement

ಕೇಂದ್ರದ ಆರ್ಥಿಕ ಪ್ಯಾಕೇಜ್‌ ಆಶಾದಾಯಕ: ಗುತ್ತೇದಾರ

05:40 AM May 16, 2020 | Team Udayavani |

ಆಳಂದ: ಕೋವಿಡ್ ಲಾಕ್ ಡೌನ್‌ ಸಂಕಷ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಪ್ಯಾಕೇಜ್‌ ರೈತರು, ಕಾರ್ಮಿಕರು ಹಾಗೂ ತೊಂದರೆಯಲ್ಲಿದ್ದವರಿಗೆ ಸಹಾಯಹಸ್ತ ನೀಡಿದಂತಾಗಿದೆಎಂದು ಶಾಸಕ ಸುಭಾಷ್‌ ಗುತ್ತೇದಾರ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮುಖ್ಯಮಂತ್ರಿಗಳು ಪ್ಯಾಕೇಜ್‌ ಘೋಷಿಸಿದ ಬೆನ್ನಲ್ಲೇ ಪ್ರಧಾನಿಗಳು ಪ್ಯಾಕೇಜ್‌ ಘೋಷಿಸಿರುವುದರಿಂದ ರಾಜ್ಯದ ಜನರಿಗೆ ಎರಡು ರೀತಿಯಿಂದ ಲಾಭವಾಗಲಿದೆ. ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಮೊತ್ತದ ಪ್ಯಾಕೇಜ್‌ ಇದಾಗಿದೆ. ಇದು ದೇಶದ ಜಿಡಿಪಿಯ ಶೇ. 10ರಷ್ಟು ಮೊತ್ತ ಹೊಂದಿದೆ. ಇದರಿಂದ ದೇಶದ ಎಲ್ಲ ವರ್ಗದವರಿಗೆ ಲಾಭವಾಗಲಿದೆ. ಪ್ರಧಾನಿಗಳು ಕರೆ ನೀಡಿರುವ ಸ್ವದೇಶಿ ಮಂತ್ರಕ್ಕೆ ಎಲ್ಲರೂ ಕೈಜೋಡಿಸಿ ದೇಶವನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಗ್ರಾಮೀಣ ಪ್ರದೇಶಕ್ಕೆ ಮರಳಿ ಬಂದ ಹಾಗೂ ಸ್ಥಳೀಯವಾಗಿ ವಾಸವಾಗಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಲಾಗುತ್ತಿದೆ. ತಮ್ಮ ದಾಖಲೆ ನೀಡಿ ಕೆಲಸದಲ್ಲಿ ತೊಡಗಬೇಕು ಎಂದು ಅವರು ಕಾರ್ಮಿಕರಿಗೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next