Advertisement

Team India ಪಾಕಿಸ್ಥಾನ ಪ್ರವಾಸವನ್ನು ಕೇಂದ್ರ ನಿರ್ಧರಿಸಲಿದೆ: ಶುಕ್ಲಾ

12:29 AM Oct 01, 2024 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ಥಾನಕ್ಕೆ ತೆರಳಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸಲಿದೆ ಎಂಬುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಹೇಳಿದ್ದಾರೆ.

Advertisement

“ಈವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಆದರೆ ಪ್ರತಿಯೊಂದು ಅಂತಾರಾಷ್ಟ್ರೀಯ ಪ್ರವಾಸಕ್ಕೂ ಸರಕಾರದ ಸಮ್ಮತಿ ಪಡೆಯುವುದು ನಮ್ಮ ನೀತಿಯಾಗಿದೆ. ಇಲ್ಲಿ ಸರಕಾರದ ನಿರ್ಧಾರವೇ ಅಂತಿಮ. ಪಾಕಿಸ್ಥಾನಕ್ಕೆ ತೆರಳುವ ವಿಚಾರಕ್ಕೂ ಇದು ಅನ್ವಯಿಸುತ್ತದೆ. ಸರಕಾರ ಏನು ಹೇಳುತ್ತದೋ ಬಿಸಿಸಿಐ ಅದನ್ನು ಪಾಲಿಸುತ್ತದೆ’ ಎಂಬುದಾಗಿ ರಾಜೀವ್‌ ಶುಕ್ಲಾ ಹೇಳಿದರು.

ಪಾಕ್‌ ಪ್ರೇರಿತ ಮುಂಬಯಿ ದಾಳಿಯ ಬಳಿಕ ಭಾರತ ತಂಡ ಪಾಕಿಸ್ಥಾನದಲ್ಲಿ ಸರಣಿ ಆಡಲು ತೆರಳಿಲ್ಲ. ಪಾಕಿಸ್ಥಾನ 7 ವರ್ಷಗಳ ಬಳಿಕ, ಕಳೆದ ವರ್ಷ ಏಕದಿನ ವಿಶ್ವಕಪ್‌ ಆಡಲು ಭಾರತಕ್ಕೆ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next