Advertisement

121 ಪೊಲೀಸ್‌ ತನಿಖಾಧಿಕಾರಿಗಳಿಗೆ ಕೇಂದ್ರದ ಗೌರವ

12:01 AM Aug 13, 2020 | mahesh |

ಹೊಸದಿಲ್ಲಿ: ಧಾರವಾಡದ ಬಿಜೆಪಿ ಕಾರ್ಯಕರ್ತ ಯೋಗೇಶ್‌ ಗೌಡ, ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಮುಂತಾದ ಪ್ರಮುಖರ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾದ 15 ಮಂದಿ ಸಿಬಿಐ ಅಧಿಕಾರಿಗಳು ಸೇರಿದಂತೆ 121 ಮಂದಿ ಪೊಲೀಸ್‌ ತನಿಖಾಧಿಕಾರಿಗಳಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಕೇಂದ್ರ ಗೃಹ ಸಚಿವರ ಅತ್ಯುತ್ಕೃಷ್ಟ ಸೇವಾ ಪದಕ ದೊರೆತಿದೆ.

Advertisement

“ತನಿಖಾ ವಿಭಾಗದಲ್ಲಿ ಕೇಂದ್ರ ಗೃಹ ಸಚಿವರ ಅತ್ಯುತ್ಕೃಷ್ಟ ಸೇವಾ ಪದಕ -2020′ ಪಡೆದ ಅಧಿಕಾರಿಗಳ ಪೈಕಿ 15 ಮಂದಿ ಸಿಬಿಐ (ಕೇಂದ್ರ ತನಿಖಾ ಸಂಸ್ಥೆ)ಗೆ ಸೇರಿದವರಾಗಿದ್ದು, ಅತಿ ಹೆಚ್ಚು ಪದಕ ಪಡೆದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಿಬಿಐ ಪಾತ್ರವಾಗಿದೆ. ಧಾರವಾಡದ ಬಿಜೆಪಿ ಕಾರ್ಯಕರ್ತ ಯೋಗೇಶ್‌ ಗೌಡ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಂಗಳೂರಿನಲ್ಲಿ ನಿಯೋಜಿತರಾಗಿದ್ದ ಇನ್‌ಸ್ಪೆಕ್ಟರ್‌ ರಾಕೇಶ್‌ ರಂಜನ್‌ ಅವರಿಗೆ ಈ ವಿಶಿಷ್ಟ ಪದಕದ ಗೌರವ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next