Advertisement

ಬೆನ್ನುಹುರಿ ಚಿಕಿತ್ಸೆಗೆ ರಾಣಿಬೆನ್ನೂರಲ್ಲಿ ಕೇಂದ್ರ ಆರಂಭ

01:06 PM Dec 23, 2019 | Suhan S |

ರಾಣಿಬೆನ್ನೂರ: ಯಾರೂ ಅಸಹಾಯಕರಲ್ಲ. ಅಸಹಾಯಕರಿಗೆ ಭಗವಂತ ಸಹಾಯ ಮಾಡುವವರನ್ನು ನಿರ್ಮಾಣ ಮಾಡಿರುತ್ತಾರೆ. ಬೆನ್ನುಹುರಿ ಚಿಕಿತ್ಸೆಗೆ ಸೌಲಭ್ಯಗಳನ್ನು ಒದಗಿಸಿ ಅವರಲ್ಲಿ ಮಾನಸಿಕ ಸಮತೋಲನೆ ತುಂಬುವುದಕ್ಕಾಗಿ ಪುನರ್ವಸತಿ ಕೇಂದ್ರವನ್ನು ನಿಶಾರ್ಡ್‌ ಸಂಸ್ಥೆಯ ಸಹಕಾರದೊಂದಿಗೆ ತೆರೆಯಲಾಗಿದೆ ಎಂದು ಸ್ಥಳೀಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ ಹೇಳಿದರು.

Advertisement

ಇಲ್ಲಿನ ಮೇಡ್ಲೆರಿ ರಸ್ತೆಯ ಓಂ ಆಸ್ಪತ್ರೆಯಲ್ಲಿ ರವಿವಾರ ದೈಹಿಕ ಮತ್ತು ಸಾಮಾಜಿಕ ಪುನಶ್ಚೇತನ ಕೇಂದ್ರ ಮತ್ತು ಮಕ್ಕಳ ಶೀಘ್ರ ಮಧ್ಯಸ್ತಿಕೆ ಕೇಂದ್ರವನ್ನು ನಿಶಾರ್ಡ್‌ ಸೇವಾ ಸಂಸ್ಥೆ, ಓಂ ಆಸ್ಪತ್ರೆ ಮತ್ತು ಬೆಂಗಳೂರಿನ ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ ಇವರುಗಳ ಸಹಯೋಗದಲ್ಲಿ ದೈಹಿಕ ಮತ್ತು ಸಾಮಾಜಿಕ ಪುನಶ್ಚೇತನ ಕೇಂದ್ರದ ಉದ್ಘಾಟಿಸಿ ಅವರು ಮಾತನಾಡಿದರು. ಬೆನ್ನುಹುರಿಯಿಂದ ಬಳಲುವವರು ಮಾನಸಿಕ ಸಾಮಾರ್ಥ್ಯವನ್ನು ಅವರೇ ನಿರ್ಮಾಣ ಮಾಡಿಕೊಳ್ಳಬೇಕಿದೆ ಎಂದರು. ಓಂ ಆಸ್ಪತ್ರೆಯ ಮುಖ್ಯಸ್ಥ ಡಾ| ಮನೋಜ ಸಾವಕಾರ ಮಾತನಾಡಿ, ಬೆನ್ನುಹುರಿ ಅಪಘಾತವು ಇತರೆ ಅಪಘಾತಗಳಿಗೆ ಹೋಲಿಸಿದರೆ ಹೆಚ್ಚು ವಿನಾಶಕಾರಿ ಗಾಯವಾಗಿದೆ. ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಯು ಅಪಘಾತದ ಮಟ್ಟದಿಂದ ಕೆಳಗೆ ಸಂಪೂರ್ಣವಾಗಿ ಸ್ಪರ್ಶ ಜ್ಞಾನವನ್ನು ಕಳೆದುಕೊಂಡು, ದಿನನಿತ್ಯದ ಚಟುವಟಿಕೆಗಳಿಗೆ ಬೇರೋಬ್ಬರ ಮೇಲೆ ಅವಲಂಬಿತವಾಗಿರುತ್ತಾರೆ. ಈ ವ್ಯಕ್ತಿಗಳು ಅತಿ ಬೇಗನೆ ದ್ವಿತೀಯಾಂತರ ಸಮಸ್ಯೆಗಳಿಗೆ ಒಳಗಾಗಿ ಶವದ ರೂಪದಲ್ಲಿ ನರಳುತ್ತಿದ್ದಾರೆ ಎಂದರು. ದೈಹಿಕ ವ್ಯಾಯಾಮ, ಬೆನ್ನುಲುಬು ಆರೈಕೆ ಸಲಹಾ ಪಿಸಿಯೋಥೆರಪಿಸ್ಟ್‌, ಹಿರಿಯಸಿಯೋಥೇರಪಿ ತಂತ್ರಜ್ಞರು, 2 ಜೂನಿಯರ್‌ ಸಹಾಯಕ ಥೆರೆಪಿಸ್ಟ್‌ ಮತ್ತು ಕೀಲು-ಮೂಳೆ ತಜ್ಞರನ್ನು ಒಂದು ಪರಿಣಿತರ ತಂಡದೊಂದಿಗೆ ಬೆನ್ನುಹುರಿ ಅಪಘಾತದ ವಿವಿಧ ಕಾರ್ಯಕ್ರಮಗಳ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದರು.

ನಿಶಾರ್ಡ್‌ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿಬಾಯಿ ಸಾವಕಾರ ಮಾತನಾಡಿ, ದೈನಂದಿನ ಚಟುವಟಿಕೆಗಳ ನಿರ್ವಹಣೆ, ಪ್ರಾಥಮಿಕ ಮತ್ತು ದ್ವೀತಿಯಾಂತರ ಸಮಸ್ಯೆಗಳ ನಿರ್ವಹಣೆ, ಪೋಷಕರಿಗೆ ನಿರ್ವಹಣೆಯ ತರಬೇತಿ, ವೈಯಕ್ತಿಕ ಮತ್ತು ಕೌಟುಂಬಿಕ ಆಪ್ತ ಸಮಾಲೋಚನೆ, ಸೂಕ್ತ ಸಾಧನ-ಸಲಕರಣೆಗಳನ್ನು ಬಳಸಿ ಮತ್ತು ಚಲನೆ ಮಾಡಿಸುವ ತರಬೇತಿ ನೀಡಲಾಗುವುದು ಎಂದರು. ಬೆಂಗಳೂರ ಎಪಿಡಿ ಸಂಸ್ಥೆಯ ನಿರ್ದೇಶಕ ಶಿವ ಹಿರೇಮಠ, ಡಾ| ಹೆವನ್ನಾ ಬಾಬು, ರವಿ ಬಿ.ಜೆ, ನಿಂಗಪ್ಪ ದೊಡ್ಡಮನಿ, ಮಂಜುನಾಥ ಮಳ್ಳಪ್ಪನವರ, ಶಿವಕುಮಾರ ದುಗ್ಗತ್ತಿಮಠ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next