Advertisement

ಪ್ರಥಮ ಬಾರಿಗೆ ರೈತಪರ ನಿರ್ಧಾರ ತೆಗೆದುಕೊಂಡ ಕೇಂದ್ರ: ವಿನಯಕುಮಾರ್ ಸೊರಕೆ

03:21 PM Nov 19, 2021 | Team Udayavani |

ಕಾಪು: ಕೇಂದ್ರ ಸರಕಾರ ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯಿದೆಗಳನ್ನು ರದ್ಧುಗೊಳಿಸುವ ಮೂಲಕ ಪ್ರಥಮ ಬಾರಿಗೆ ರೈತ ಪರವಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.‌

Advertisement

ಇದು ಕಾಂಗ್ರೆಸ್ ಪಕ್ಷ ಸಹಿತ ರಾಜಕೀಯ ಪಕ್ಷಗಳು, ರೈತ ಪರ ಸಂಘಟನೆಗಳು, ರೈತರು ಮತ್ತು ಹೋರಾಟಗಾರರ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ-ಟಿಎಂಸಿ ಘರ್ಷಣೆ: 19 ಮಂದಿಗೆ ಗಾಯ;ನಿಷೇಧಾಜ್ಞೆ ಜಾರಿ

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಹುಟ್ಟು ಹಬ್ಬದ ದಿನದಂದೇ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ರದ್ಧುಗೊಳಿಸುವ ಮೂಲಕ ಪ್ರಜಾಪ್ರಭುತ್ವ ರಾಷ್ಟದಲ್ಲಿ ನಾವೆಲ್ಲರೂ ಜೊತೆಗೂಡಿ ನಡೆಸಿದ ಹೋರಾಟಕ್ಕೆ ಗೌರವ ನೀಡಿದೆ. ಇದರ ಹಿಂದೆ ಹೋರಾಟ ನಿರತ ರೈತ ಪರ ಸಂಘಟನೆಗಳು, ಬಲಿದಾನಗೈದ ರೈತರಿಗೆ, ಹೋರಾಟಗಾರರನ್ನು ಅಭಿನಂದಿಸುವುದಾಗಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next