Advertisement

ಸಂಯುಕ್ತಾ ಪಾಟೀಲ ಗೆಲುವಿಗೆ ಸಂಭ್ರಮಾಚರಣೆ

03:55 PM Feb 07, 2021 | Adarsha |

ಬಸವನಬಾಗೇವಾಡಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಂಯುಕ್ತಾ ಪಾಟೀಲ ಆಯ್ಕೆಯಾಗಿದ್ದನ್ನು ಸ್ವಾಗತಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

Advertisement

ಪಟ್ಟಣಕ್ಕೆ ಆಗಮಿಸಿದ ಸಂಯುಕ್ತಾ ಪಾಟೀಲ ಅವರನ್ನು ಬಸವನಬಾಗೇವಾಡಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪುರಸಭೆ ಸದಸ್ಯರು ಸ್ವಾಗತಿಸಿದರು. ಬಸವೇಶ್ವರ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ನಂತರ ಮೂಲ ನಂದೀಶ್ವರ (ಬಸವೇಶ್ವರ) ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಇದನ್ನೂ ಓದಿ:ಭಗವಾನ್‌ ಮುಖಕ್ಕೆ ಮಸಿ ಖಂಡಿಸಿ ಪ್ರತಿಭಟನೆ

ಈ ವೇಳೆ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಯಾಣಿ,  ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಬೆಲ್ಲದ, ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಜೀವನ ಮ್ಯಾಗೇರಿ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ರಾಜು ಭೂತನಾಳ, ಅಶೋಕ ಹಾರಿವಾಳ, ಪ್ರವೀಣ ಪೂಜಾರಿ, ದೇವೇಂದ್ರ ಚವ್ಹಾಣ, ಗೀತಾ ಬಾಗೇವಾಡಿ, ಪುರಸಭೆ ಮಾಜಿ ಅಧ್ಯಕ್ಷ ಬಸಣ್ಣ ಕಲ್ಲೂರ, ಸಂಜು ಕಲ್ಯಾಣಿ, ಮುಖಂಡರಾದ ಶರಣಪ್ಪ ಬೆಲ್ಲದ, ಉಮೇಶ ಅವಟಿ, ಶಿವಾನಂದ ಬೆಲ್ಲದ, ಜಟ್ಟಿಂಗರಾಯ ಮಾಲಗಾರ, ಮುತ್ತು ಪತ್ತಾರ, ಸಂಗು ಜಾಲಗೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next