Advertisement

ಮಡಂತ್ಯಾರು: ಮೊಸರು ಕುಡಿಕೆ ಸಮಾರೋಪ

08:15 AM Aug 17, 2017 | Harsha Rao |

ಮಡಂತ್ಯಾರು : ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಡಂತ್ಯಾರು ಇದರ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಮಂಗಳವಾರ ಮಡಂತ್ಯಾರು ಗಣಪತಿ ಮಂಟಪದ ವಠಾರದಲ್ಲಿ ನಡೆಯಿತು.

Advertisement

ಸಂಜೆ ಸಮಾರೋಪ ಸಮಾರಂಭ ನಡೆದಿದ್ದು ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಚರ್ಚ್‌ನ ಧರ್ಮಗುರು ಬೇಸಿಲ್‌ ವಾಸ್‌ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಎಪಿಎಂಸಿ ಅಧ್ಯಕ್ಷ  ಬೂಡಿಯಾರ್‌ ರಾಧಾಕೃಷ್ಣ , ಮಡಂತ್ಯಾರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾಗೇಶ್‌ ಎಂ., ಉಜಿರೆ ಗ್ರಾ.ಪಂ. ಸದಸ್ಯ ರವಿಕುಮಾರ್‌ ಬರಮೇಲು, ವಾಮದಪದವು ಯಜಮಾನ ಇಂಡಸ್ಟ್ರೀಯ ವರದರಾಜ್‌ ಪೈ, ಮಡಂತ್ಯಾರು ಜೇಸಿ ಅಧ್ಯಕ್ಷ ರಾಜೇಶ್‌ ಪುಳಿಮಜಲು, ಮಡಂತ್ಯಾರು ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಅರುಣ್‌ ಸಾಲ್ಯಾನ್‌, ಕಾರ್ಯದರ್ಶಿ ಸತೀಶ್‌ ಸಾಲ್ಯಾನ್‌ ಮೂಡಬೆಟ್ಟು ಉಪಸ್ಥಿತರಿದ್ದರು.

ನಿವೃತ್ತ ಸೈನಿಕರಾದ ಕಾಂತಪ್ಪ ಗೌಡ ಹಟ್ಟತ್ತೋಡಿ ಮತ್ತು ಸತೀಶ್‌ ಸುವರ್ಣ ಮಡಂತ್ಯಾರು ಅವರಿಗೆ ಸಮ್ಮಾನಿಸಲಾಯಿತು. ಸಂಜೆ ನಡೆದ ರೋಮಾಂಚನಕಾರಿ ಬೈಕ್‌ ರೇಸ್‌ ಸ್ಪರ್ಧೆಯಲ್ಲಿ  ಶ್ಯಾಮ್‌ ಕ್ಯಾಟ್‌ರೇಸಿಂಗ್‌ ಮಂಗಳೂರು ಪ್ರಥಮ, ದೀಕ್ಷಿತ್‌ ಶೆಟ್ಟಿ ಬೈಕ್‌ ಓಲ್ಟ್ ಮಂಗಳೂರು ದ್ವಿತೀಯ, ಆಕಾಶ್‌ ಆಚಾರ್ಯ ಬೈಕ್‌ ಓಲ್ಟ್ ಮಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next