Advertisement

ವಿವಿಧೆಡೆ ಸಂಭ್ರಮದ ಧ್ವಜಾರೋಹಣ

10:36 AM Aug 18, 2017 | Team Udayavani |

ಹುಣಸಗಿ: ಸಮೀಪದ ಕೊಡೇಕಲ್ಲ ಗ್ರಾಮದ ರಾಜಾ ತಿಮ್ಮಪ್ಪನಾಯಕ ಜಹಾಗೀರದಾರ ಶಿಕ್ಷಣ ಸಂಸ್ಥೆಯ ಆರ್‌ಟಿಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 71ನೇ ಸ್ವಾತಂತ್ರ್ಯದಿನೋತ್ಸವ ನಿಮಿತ್ತ ಸಂಸ್ಥೆಯ ಕಾರ್ಯದರ್ಶಿ ತಿಮ್ಮಮ್ಮ ಶಂಭನಗೌಡ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಅಧ್ಯಕ್ಷ ಹಣಮಂತನಾಯಕ (ಬಬಲುಗೌಡ), ಅಮರೇಶ ನಾಯಕ, ರಂಗನಾಥ ದೊರೆ, ಮೋಹನ ಪಾಟೀಲ್‌, ಭಸವಂತಭಟ್‌ ಜ್ಯೋಶಿ, ಡಾ| ಜಿ.ಎಸ್‌. ಪಂಜಗಲ್‌, ಮನೋಹರ ಶಹಾಪುರ, ಮಲ್ಲು ನವಲಗುಡ್ಡ, ಭೀಮರಾಯ ಹೆಬ್ಟಾಳ, ರಾಜೇಂದ್ರ, ಮಾಲಿನಿ, ತಾರಾ ಇದ್ದರು. ಸರಕಾರಿ ಪದವಿ ಪೂರ್ವ ಕಾಲೇಜು: ಪ್ರಾಚಾರ್ಯ ಎಸ್‌.ಎನ್‌.ಅಗ್ನಿ ಧ್ವಜಾರೋಹಣ ನೆರವೇರಿಸಿದರು. ಎಸ್‌. ಎಮ್‌. ನಾಗರಬೆಟ್ಟ, ಬಸವರಾಜ ವಂದಲಿ, ಸವಿತಾ ಇದ್ದರು. ಗ್ರಾಪಂ ಕಚೇರಿ: ಗ್ರಾಪಂ ಅಧ್ಯಕ್ಷ ಮಹಿಮಪ್ಪ ಸೊನ್ನಾಪುರ ಧ್ವಜಾರೋಹಣ ನೆರವೇರಿಸಿದರು.ರಾಜಾ ಜೀತೇಂದ್ರ ನಾಯಕ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ,
ಬಬ್ಲುಗೌಡ, ತಾಪಂ ಸದಸ್ಯ ಮೋಹನ ಪಾಟೀಲ್‌, ರಂಗನಾಥ ದೊರೆ, ವಿ.ಎಸ್‌. ಹಾವೇರಿ, ಕನಕು ಜಿರಾಳ, ದೇವು ಗೋಪಾಳೆ, ಗ್ರಾಪಂ ಉಪಾಧ್ಯಕ್ಷೆ ನಿಂಬೆವ್ವ ಹಾವೇರಿ ಪಟ್ಟಣದ ಎಲ್ಲಾ ಶಾಲೆಗಳ ಮುಖ್ಯಗುರುಗಳು, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗ: ಉಪಪ್ರಾಚಾರ್ಯ ಭೀಮರಾಯ ಐಕೂರು ಧ್ವಜಾರೋಹಣ ನೆರವೇರಿಸಿದರು. ಎಎಸ್‌ಡಿಎಂಸಿ ಅಧ್ಯಕ್ಷ ರಂಗನಾಥ ದೊರೆ, ಸುರೇಶ ಅರಗಂಜಿ, ಎಚ್‌.ಎಸ್‌. ಪಾಟೀಲ್‌, ಸುರೇಶ ಯಾದಗಿರಿ, ಭೀಮರಾಯ ಐಕೂರ ಸೇರಿದಂತೆ ಶಾಲಾ
ಮಕ್ಕಳು ಹಾಜರಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ: ಪ್ರಾಚಾರ್ಯ ಶಶಿಕಲಾ ಮಾಲಿಪಾಟೀಲ್‌ ಧ್ವಜಾರೋಹಣ ನೆರವೇರಿಸಿದರು. ಉಪ-ಪ್ರಾಚಾರ್ಯ ಆರ್‌.ಡಿ. ಬಿರಾದಾರ, ಎ.ಎಸ್‌. ನೀಲಗಾರ, ಅಶ್ಪಾಕ ಅಹಮದ್‌ ದನದಮನಿ, ಎ.ಕೆ. ಹಿರೇಮಠ, ಎಸ್‌. ಎಂ.ಪೂಜಾರಿ, ಶಿವಶರಣ ಕಟ್ಟಿಮನಿ, ಶ್ರುತಿ ಮಳಿಮಠ, ನೀಲಪ್ಪ ನೀಲಗಾರ ಇದ್ದರು. ನಾಡ ಕಾರ್ಯಾಲಯ: ಉಪತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಹಣಮಂತಪ್ಪ ಹಂಡರಗಲ್‌, ಯಮನಪ್ಪ ಚವನಬಾವಿ, ಪರಶುರಾಮ ಕಾಳಾಪುರ, ಸಂಗಪ್ಪ ನಾಟೇಕಾರ ಮತ್ತಿತರಿದ್ದರು. ಪೊಲೀಸ್‌ ಠಾಣೆ: ಸ್ಥಳೀಯ ಠಾಣೆಯಲ್ಲಿ ಪಿಎಸ್‌ಐ ಕಾಳಪ್ಪ ಬಡಿಗೇರ ಧ್ವಜಾರೋಹಣ ನೆರವೇರಿಸಿದರು. ಆರಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರ : ವೈದ್ಯಾಧಿಕಾರಿ ಡಾ.ಧರ್ಮರಾಜ ಹೊಸಮನಿ ಧ್ವಜಾರೋಹಣ ನೆರವೇರಿಸಿದರು. ಬಸವರಾಜೇಶ್ವರಿ ನೀಲಗಾರ, ಚನ್ನಬಸ್ಸು ನಾಲತವಾಡ, ಜುಬೇದಾ ಪಟೇಲ್‌, ಬಜಾರಪ್ಪ ರಾಯಚೂರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next