Advertisement

ಸಿಡಿ ಲೇಡಿಯಿಂದ ರಮೇಶ ವಿರುದ್ಧ ಹಣದ ಆಮಿಷದ ಆರೋಪ

03:31 PM May 06, 2021 | Team Udayavani |

ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಮರೆಯಾಗಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಸಿಡಿ ಪ್ರಕರಣ ಮತ್ತೂಮ್ಮೆ ಸದ್ದು ಮಾಡಿದೆ. ಸಿಡಿಯಲ್ಲಿರುವ ಯುವತಿ ಮತ್ತೂಮ್ಮೆ ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಮತ್ತು ತನಿಖಾಧಿಕಾರಿ ಕವಿತಾ ಅವರಿಗೆ ಪತ್ರ ಬರೆದು ರಮೇಶ್‌ ಜಾರಕಿಹೊಳಿ ವಿರುದ್ಧ ತಮ್ಮ ಪರ ವಕೀಲರಿಗೆ ಹಣದ ಆಮಿಷವೊಡ್ಡಿದ ಆರೋಪ ಮಾಡಿದ್ದಾರೆ.

Advertisement

ರಮೇಶ್‌ ಜಾರಕಿಹೊಳಿ ಕಡೆಯಿಂದ ತಮ್ಮ ಪರ ವಕೀಲ ಸೂರ್ಯ ಮುಕುಂದರಾಜ್‌ ಮತ್ತು ಕೆ.ಎನ್‌. ಜಗದೀಶ್‌ ಅವರಿಗೆ ವಾಟ್ಸ್‌ಆಪ್‌ ಮೂಲಕ ಕರೆಮಾಡಿ ಹಣದ ಆಮಿಷವೊಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ನ್ಯಾಯ ಒದಗಿಸಲು ಯುವತಿ ವಿನಂತಿ: ರಮೇಶ್‌ ಜಾರಕಿಹೊಳಿ ಕಡೆಯವರು ನಿರಂತರವಾಗಿ ಸಾಕ್ಷ್ಯ ನಾಶಮಾಡಲು ಮತ್ತು ನನ್ನ ಮತ್ತು ನನ್ನ ವಕೀಲರ ಮೇಲೆ ಪ್ರಕರಣ ಹಿಂಪಡೆಯುವಂತೆ ಎಲ್ಲ ರೀತಿಯ ಒತ್ತಡ ಬೀರುತ್ತಿದ್ದಾರೆ. ದೂರವಾಣಿ ಕರೆ ಮಾಡಿದ ಪ್ರದೀಪ್‌ ಪಾಟೀಲ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೋರುತ್ತೇನೆ.

ಜತೆಗೆ ತನ್ನ ಹಿಂಬಾಲಕರ ಮೂಲಕ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಿರುವ ಆರೋಪಿ ರಮೇಶ್‌ ಜಾರಕಿಹೊಳಿಯನ್ನುಕೂಡಲೇ ಬಂಧಿಸಿ ನನಗೆ ನ್ಯಾಯ ಒದಗಿಸಿ ರಕ್ಷಣೆ ನೀಡಬೇಕೆಂದು ಪತ್ರದಲ್ಲಿ ಯುವತಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next