Advertisement

ಸಿಸಿಬಿ ಮುಂದೆ ಗೀತಾವಿಷ್ಣು ಹಾಜರು

12:09 PM Oct 07, 2017 | |

ಬೆಂಗಳೂರು: ಅಕ್ರಮವಾಗಿ ಮಾದಕ ವಸ್ತು ಸಂಗ್ರಹ ಹಾಗೂ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಟಿಡಿ ಮಾಜಿ ಅಧ್ಯಕ್ಷ ದಿ.ಆದಿಕೇಶವಲು ಮೊಮ್ಮಗ ಗೀತಾವಿಷ್ಣು  ಶುಕ್ರವಾರವು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

Advertisement

ಗೀತಾವಿಷ್ಣು ಮಾತ್ರವಲ್ಲದೇ ಈತನ ಸ್ನೇಹಿತರಾದ ನಟ ದೇವರಾಜ್‌ ಎರಡನೇ ಪುತ್ರ ಪ್ರಣಾಮ್‌, ವಿನೋದ್‌, ಫೈಜಲ್‌ ವಿಚಾರಣೆಗೆ ಬಂದಿದ್ದು, ಮೂವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಯಿತು. ಈ ಪೈಕಿ ವಿನೋದ್‌ ಹೇಳಿಕೆ ದಾಖಲಿಸುವ ವೇಳೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಷ್ಣು ಪರಾರಿಯಾಗಲು ನೆರವಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಕಾರಿನಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆ ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ನಾಲ್ಕೈದು ದಿನಗಳ ಕಾಲ ತಲೆಮರೆಸಿಕೊಂಡು ನಂತರ ಜಾಮೀನು ಪಡೆಯುವಂತೆ ಸಲಹೆ ನೀಡಿದ್ದೇನೆ. ಘಟನೆ ನಡೆದ ದಿನ ಎಲ್ಲ ಸ್ನೇಹಿತರು ಪಾರ್ಟಿ ಮಾಡಿದ್ದೇವು. ನಂತರ ಎಲ್ಲರೂ ಮನೆಗಳಿಗೆ ತೆರಳಿದರು.

ಆದರೆ, ರಸ್ತೆ ಅಪಘಾತವಾಗುವ ಸಂದರ್ಭದಲ್ಲಿ ನಾವು ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಇನ್ನು ಸ್ನೇಹಿತರು ನೀಡಿರುವ ಹೇಳಿಕೆಯನ್ನು ವಿಷ್ಣು ಕೂಡ ಒಪ್ಪಿಕೊಂಡಿದ್ದಾನೆ. ಹೀಗಾಗಿ ಶನಿವಾರ ಕೂಡ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೇವೆ ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next