Advertisement

ಸಿಬಿಐ ಉನ್ನತಾಧಿಕಾರಿಗಳು ಬೆಕ್ಕುಗಳಂತೆ ಕಾದಾಡುತ್ತಿದ್ದರು: ಎಜಿ

07:19 PM Dec 05, 2018 | udayavani editorial |

ಹೊಸದಿಲ್ಲಿ : ‘ಸಿಬಿಐ ನ ಇಬ್ಬರು ಉನ್ನತ ಅಧಿಕಾರಿಗಳಾದ ಆಲೋಕ್‌ ವರ್ಮಾ ಮತ್ತು ರಾಕೇಶ್‌ ಅಸ್ಥಾನಾ ಅವರು ಬೆಕ್ಕುಗಳಂತೆ ಪರಸ್ಪರ ಕಾದಾಡುತ್ತಿದ್ದರು. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸುವುದು ಕೇಂದ್ರ ಸರಕಾರಕ್ಕೆ ಅತ್ಯಂತ ಅಗತ್ಯವಾಗಿತ್ತು’ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿದರು. 

Advertisement

“ಈ ಇಬ್ಬರು ಉನ್ನತ ಸಿಬಿಐ ಅಧಿಕಾರಿಗಳ ಕಾದಾಟವನ್ನು ಸರಕಾರ ಅತ್ಯಂತ ಆಶ್ಚರ್ಯದಿಂದ ಗಮನಿಸಿತು. ಇವರೇನು ಮಾಡುತ್ತಿದ್ದಾರೆ ಎಂಬುದು ಊಹೆಗೆ ಮೀರಿದ್ದಾಗಿತ್ತು. ಅವರು ಬೆಕ್ಕುಗಳಂತೆ ಕಾದಾಡುತ್ತಿದ್ದರು. ಅವರ ಈ ಜಗಳ ಬಹಳ ಗಂಭೀರ ಬಗೆಯದ್ದಾಗಿತ್ತು ಮತ್ತು ಸಾರ್ವಜನಿಕ ಚರ್ಚೆಯ ವಿಷಯವಾಗಿತ್ತು’ ಎಂದು ವೇಣುಗೋಪಾಲ್‌ ಪೀಠಕ್ಕೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next