Advertisement

“ಮೂಡಾ’ಅಕ್ರಮ: ಐವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ ವಿಶೇಷ ಕೋರ್ಟ್

08:07 PM Sep 09, 2022 | Team Udayavani |

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಸೇರಿದ 1 ಕೋಟಿ ರೂ. ಅನ್ನು ದುರುಪಯೋಗಪಡಿಸಿದ್ದ ಐವರಿಗೆ ಸಿಬಿಐ ವಿಶೇಷ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ 5,02 ಕೋಟಿ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಎ.ಆರ್‌.ಲಾಜಿಸ್ಟಿಕ್ಸ್‌ನ ಕೆ. ಆನಂದ್‌ ಅಲಿಯಾಸ್‌ ಕೆಬ್ಬಳ್ಳಿ ಆನಂದ್‌, ಫ್ಯೂಚರ್‌ ಫಾರ್ಮ್ ಆ್ಯಂಡ್‌ ಎಸ್ಟೇಟ್‌ ಲಿ. ನ ಸಿಇಒ ನಾಗಲಿಂಗ ಸ್ವಾಮಿ, ರಿಯಲ್‌ ಎಸ್ಟೇಟ್‌ ಏಜೆಂಟ್‌ ಚಂದ್ರಶೇಖರ್‌, ಮೂಡಾದಲ್ಲಿ ಎಫ್ಡಿಎ ಆಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಕೆ. ನಾಗರಾಜ್‌, ಖಾಸಗಿ ವ್ಯಕ್ತಿ ಕೆ.ಬಿ.ಹರ್ಷನ್‌ ಶಿಕ್ಷೆಗೊಳಗಾದವರು.

ಇವರು ಫೋರ್ಜರಿ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಮೂಡಾಗೆ ಸೇರಿದ 5 ಕೋಟಿ ರೂ. ಅನ್ನು ಅಲಹಾಬಾದ್‌ ಬ್ಯಾಂಕ್‌ನಿಂದ ಇಂಡಿಯನ್‌ ಬ್ಯಾಂಕ್‌ನಲ್ಲಿದ್ದ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.

ಈ ವಿಚಾರ ಬೆಳಕಿಗೆ ಬಂದ ಬಳಿಕ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸಿತ್ತು. ಸಿಬಿಐ ಪರ ಸರಕಾರಿ ಅಭಿಯೋಜಕಿ ಹೇಮಾ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next