Advertisement

ಚಿದಂಬರಂಗೆ ಶಾಕ್‌;ಪುತ್ರನ ನಿವಾಸ ,ಕಚೇರಿಗಳ ಮೇಲೆ ಸಿಬಿಐ ದಾಳಿ 

09:09 AM May 16, 2017 | |

ಚೆನ್ನೈ : ಮಾಜಿ ಕೇಂದ್ರ ಹಣಕಾಸು ಸಚಿವ, ಪ್ರಭಾವಿ ಕಾಂಗ್ರೆಸ್‌ ನಾಯಕ ಪಿ.ಜಿದಂಬರಂ ಮತ್ತು ಪುತ್ರ ಕಾರ್ತಿ ನಿವಾಸ ಮತ್ತು ಕಚೇರಿಗಳ  ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ  ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶಾಕ್‌ ನೀಡಿದ್ದಾರೆ.

Advertisement

ಚೆನ್ನೈನ ನುಂಗಂಬಾಕಂನಲ್ಲಿರುವ ಕಾರ್ತಿಕ್‌ ನಿವಾಸ ಮತ್ತು ಕಚೇರಿಗಳು, ದೆಹಲಿ ಮತ್ತು ನೋಯ್ಡಾದ ಕಚೇರಿಗಳು ಸೇರಿ ಏಕಕಾಲದಲ್ಲಿ 14 ಸ್ಥಳಗಳ  ಮೇಲೆ 10 ಕ್ಕೂ ಹೆಚ್ಚು ಅಧಿಕಾರಿಗಳ ನೇತೃತ್ವದಲ್ಲಿ  ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 

ಕಾನೂನು ಬಾಹಿರ ವಿದೇಶಿ  ಹೂಡಿಕೆ ಮಾಡಿದ ಕಾರಣಕ್ಕಾಗಿ ಸಿಬಿಐ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next