Advertisement

ಎನ್‌ಎಸ್‌ಇ ಕೇಸು: ಸಿಬಿಐನಿಂದ ಮತ್ತೊಬ್ಬ ಅಧಿಕಾರಿ ವಿಚಾರಣೆ

09:34 PM Feb 20, 2022 | Team Udayavani |

ನವದೆಹಲಿ/ಮುಂಬೈ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌ಎಸ್‌ಇ)ನಲ್ಲಿ ಬೆಳಕಿಗೆ ಬಂದಿರುವ ಅವ್ಯವಹಾರ ಪ್ರಕರಣ ಪ್ರಯುಕ್ತ ಸಿಬಿಐ ಮತ್ತೊಬ್ಬ ಹಿರಿಯ ಅಧಿಕಾರಿ ರವಿ ನಾರಾಯಣ ಅವರನ್ನು ಭಾನುವಾರ ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

Advertisement

ಅದಕ್ಕಿಂತ ಮೊದಲು ನಡೆದಿದ್ದ ಬೆಳವಣಿಗೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಚಿತ್ರಾ ರಾಮಕೃಷ್ಣ ಅವರನ್ನೂ ಕೇಂದ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸಿತ್ತು. ಇದೇ ವೇಳೆ, ರವಿ ನಾರಾಯಣ್‌ ಅವರು, ಪರಾರಿಯಾಗಿ ಲಂಡನ್‌ಗೆ ತೆರಳಿಲ್ಲ. ಭಾರತದಲ್ಲಿಯೇ ಇದ್ದಾರೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಹಿಮಾಲಯದಲ್ಲಿರುವ ಧಾರ್ಮಿಕ ಗುರುವಿನ ಜತೆಗೆ ಎನ್‌ಎಸ್‌ಇನ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಂಡಿದ್ದ ಬಗ್ಗೆ ಚಿತ್ರಾ ರಾಮಕೃಷ್ಣನ್‌ ಹೇಳಿಕೊಂಡಿರುವುದರಿಂದ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಮತ್ತೊಂದು ಬೆಳವಣಿಗೆಯಲ್ಲಿ ನ್ಯಾಷನಲ್‌ ಸ್ಟಾಕ್‌ಎಕ್ಸ್‌ಚೇಂಜ್‌ನ ಆಡಳಿತ ಮಂಡಳಿಗೆ ಚಿತ್ರಾ ರಾಮಕೃಷ್ಣನ್‌ ಅವರ ವಿಚಾರಗಳು ಗೊತ್ತಿತ್ತು. ಆದರೆ, ಸೆಬಿ ಮಾಹಿತಿ ನೀಡುವಲ್ಲಿ ವಿಫ‌ಲವಾಯಿತು ಎಂದು “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next