Advertisement

ಸಿಬಿಐ ಅಧಿಕಾರಿಗಳಿಗೆ ನನ್ನ ಮೇಲೆ ಪ್ರೀತಿ; ಡಿಕೆಶಿ ವ್ಯಂಗ್ಯ

09:50 PM Sep 28, 2022 | Team Udayavani |

ಬೆಂಗಳೂರು: ಅತ್ತ ರಾಹುಲ್‌ಗಾಂದಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಸ್ವಾಗತದ ಸಿದ್ಧತೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಿಬಿಐ ಅಧಿಕಾರಿಗಳ ದಾಳಿ ಕುರಿತು, ನನ್ನ ಮೇಲೆ ಅವರಿಗೆ ಪ್ರೀತಿ ಜಾಸ್ತಿ ಇರುವುದರಿಂದ ಆಗಾಗ್ಗೆ ಬರುತ್ತಿರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ನಾನು ಈಗಾಗಲೇ ಎಲ್ಲ ದಾಖಲೆ ಕೊಟ್ಟಿದ್ದೇನೆ. ಆದರೂ ತಹಶೀಲ್ದಾರ್‌ ಜತೆಗೆ ಬಂದು ಊರಿನಲ್ಲಿರುವ ಆಸ್ತಿಗಳನ್ನು ಸಿಬಿಐ ಅಧಿಕಾರಿಗಳು ಪರಿಶೀಲಿಸಿದ್ದಾರೆ. ನನಗೆ ತುಂಬಾ ನೋವಿದೆ. ದಾಳಿಯ ಬಗ್ಗೆ ಬೇರೆಯೇ ಮಾಹಿತಿ ಇದೆ. ಮುಂದೆ ಮಾತನಾಡುತ್ತೇನೆ. ಇಂತಹ ಯಾವುದೇ ದಾಳಿಗೆ ವಿಚಲಿತನಾಗುವುದಿಲ್ಲ ಎಂದು ಹೇಳಿದ್ದಾರೆ.

ಕನಕಪುರ, ತೋಟದ ಮನೆಗಳಲ್ಲಿರುವ ಆಸ್ತಿಗಳನ್ನು ನೋಡಿಕೊಂಡು ಹೋಗಿದ್ದಾರೆ ಎಂಬ ವಿಚಾರವನ್ನು ಅಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಿಬ್ಬಂದಿ ಹೇಳಿದ್ದಾರೆ. ನಮ್ಮನ್ನು ಅವರು ಬಹಳ ಪ್ರೀತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next