Advertisement

ತೆಲಂಗಾಣದಲ್ಲಿ ಸಿಬಿಐ ತನಿಖೆಗೆ ಅನುಮತಿ ಇಲ್ಲ

11:54 PM Oct 30, 2022 | Team Udayavani |

ಹೈದರಾಬಾದ್‌: “ರಾಜ್ಯದಲ್ಲಿ ಇನ್ನು ಮುಂದೆ ಸಿಬಿಐಗೆ ತನಿಖೆ ನಡೆಸಲು ಇರುವ ಅನುಮತಿ ರದ್ದು ಮಾಡಲಾಗಿದೆ. ಆಗಸ್ಟ್‌ ನಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ’- ಹೀಗೆಂದು ತೆಲಂಗಾಣ ಸರಕಾರ ಅಲ್ಲಿನ ಹೈಕೋರ್ಟ್‌ಗೆ ಅರಿಕೆ ಮಾಡಿ ಕೊಂಡಿದೆ.

Advertisement

ಟಿಆರ್‌ಎಸ್‌ ಶಾಸಕರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಬಿಜೆಪಿ ಮುಖಂಡ ಗುಜ್ಜುಲ ಪ್ರೇಮೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ತೆಲಂಗಾಣದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌(ಎಎಜಿ) ಅವರು ಈ ಮಾಹಿತಿ ನೀಡಿ¨ªಾರೆ. ಆ. 30ರಂದೇ ಈ ಬಗ್ಗೆ ಆದೇಶ ಹೊರಡಿಸಲಾಗಿತ್ತು ಎಂದು ನ್ಯಾಯಪೀಠಕ್ಕೆ ಅರಿಕೆ ಮಾಡಿದ್ದಾರೆ. ವಿಪಕ್ಷಗಳು ಆಡಳಿತದಲ್ಲಿ ಇರುವ ಕೆಲವು ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಅನುಮತಿ ಇಲ್ಲ.

ಇದೇ ವೇಳೆ, ಹೊಸದಿಲ್ಲಿ ಯಿಂದಲೇ ಪಕ್ಷದ ನಾಲ್ವರು ಶಾಸಕರ ಖರೀದಿಗೆ ಡೀಲ್‌ ನಡೆ ಸಲಾಗಿತ್ತು’ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಆರೋಪಿಸಿದ್ದಾರೆ. ಆದರೆ 100 ಕೋಟಿ ರೂ. ಆಮಿಷ ತಿರಸ್ಕರಿಸಿ ದ್ದಾರೆ. ಪ್ರಧಾನಿಯವರೇ ಇಂಥ ಕ್ರೂರತೆ ಯನ್ನೇಕೆ ಪ್ರದರ್ಶಿಸುತ್ತಿದ್ದೀರಿ ಎಂದು ರಾವ್‌ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next