Advertisement

ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಉಮ್ಮನ್‌ ಚಾಂಡಿಗೆ ರಿಲೀಫ್

06:35 PM Dec 28, 2022 | Team Udayavani |

ತಿರುವನಂತಪುರ: ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಗುರಿಯಾಗಿದ್ದ ಕೇರಳದ ಮಾಜಿ ಸಿಎಂ ಉಮ್ಮನ್‌ ಚಾಂಡಿ, ಈಗ ನಿರಾಳರಾಗಿದ್ದಾರೆ.

Advertisement

ಪ್ರಕರಣದ ತನಿಖೆ ನಡೆಸಿದ ಸಿಬಿಐ ಅವರಿಗೆ ಪೂರ್ಣ ಬಿಡುಗಡೆ ನೀಡಿದೆ. ಈ ಕುರಿತ ತನಿಖಾ ವರದಿಯನ್ನು ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದೆ.

ಉಮ್ಮನ್‌ ಚಾಂಡಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಕಳೆದ ವರ್ಷ ಸಿಬಿಐ ತನಿಖೆ ಆರಂಭಿಸಿತ್ತು.

ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸಕ್ಕೆ ಮಹಿಳೆ ಹೋಗಿದ್ದಾರೆನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಸಿಬಿಐ ಹೇಳಿದೆ.

ಸೌರಫ‌ಲಕ ಹಗರಣದಲ್ಲಿ ಮುಖ್ಯ ಆರೋಪಿಯಾಗಿರುವ ಮಹಿಳೆ ; ತಮ್ಮ ಮೇಲೆ ಚಾಂಡಿ ಮತ್ತಿತರರು ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next