Advertisement

ಪ್ರಗತಿ ಮೈದಾನ್‌ ಭ್ರಷ್ಟಾಚಾರ: NBCC CMD ವಿರುದ್ಧ ಸಿಬಿಐ ಕೇಸ್‌

04:26 PM Dec 23, 2017 | Team Udayavani |

ಹೊಸದಿಲ್ಲಿ : ಇಲ್ಲಿನ ಪ್ರಗತಿ ಮೈದಾನದಲ್ಲಿನ ಐಟಿಪಿಓ ಸಂಕೀಣದ 2,150 ಕೋಟಿ ರೂ. ಅಭಿವೃದ್ಧಿ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಎನ್‌ಬಿಸಿಸಿ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿರುವ (ಸಿಎಂಡಿ) ಅನೂಪ್‌ ಕುಮಾರ್‌ ಮಿತ್ತಲ್‌ ವಿರುದ್ಧ ಕೇಸು ದಾಖಲಿಸಿಕೊಂಡು ಓರ್ವ ಅಧಿಕಾರಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಈ ಕೇಸ್‌ ಸಂಬಂಧ ಬಂಧಿಸಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಸಿಬಿಐನಿಂದ ಬಂಧಿತರಾದ ಸರಕಾರಿ ಅಧಿಕಾರಿ ಎಂದರೆ ಪ್ರದೀಪ್‌ ಕುಮಾರ್‌ ಮಿಶ್ರಾ ಮತ್ತು ಆಕಾಶ್‌ದೀಪ್‌ ಚೌಹಾಣ್‌. ಈ ಕೇಸ್‌ ಸಂಬಂಧವಾಗಿ ಸಿಬಿಐ ಗಾಜಿಯಾಬಾದ್‌, ದಿಲ್ಲಿ ಮತ್ತು ಮುಂಬಯಿಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಸಿಬಿಐ ಅಧಿಕಾರಿ ಹೇಳಿದ್ದಾರೆ. 

ಸಿಎಂಡಿ ಅನೂಪ್‌ ಕುಮಾರ್‌ ಮಿತ್ತಲ್‌ ಅವರ ನಿವಾಸ ಹಾಗೂ ಅಧಿಕೃತ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿಲ್ಲ; ಬಂಧಿತರಾಗಿರುವ ಮಿಶ್ರಾ ಮತ್ತು ಚೌಹಾಣ್‌ ಅವರನ್ನು ಸಿಬಿಐ ವಿಶೇಷ ಕೋರ್ಟ್‌ ನಾಲ್ಕು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next