Advertisement

25 ಲಕ್ಷ ರೂಪಾಯಿ ಲಂಚ ಪ್ರಕರಣ; ಮಧ್ಯವರ್ತಿ ಜತೆಗೆ DRI ಎಡಿಜಿ ಸಿಬಿಐ ಬಲೆಗೆ

10:12 AM Jan 02, 2020 | Nagendra Trasi |

ನವದೆಹಲಿ: 25 ಲಕ್ಷ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೋರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ ಐ)ನ ಅಡಿಷನಲ್ ಡೈರೆಕ್ಟರ್ ಜನರಲ್ ಚಂದ್ರಶೇಖರ್ ಮತ್ತು ಮಧ್ಯವರ್ತಿಯನ್ನು ಸಿಬಿಐ ಬುಧವಾರ ಬಂಧಿಸಿದೆ.

Advertisement

ಡಿಆರ್ ಐ ವೆಬ್ ಸೈಟ್ ಪ್ರಕಾರ, ಚಂದ್ರಶೇಖರ್ ಅವನ್ನು ಲುಧಿಯಾನಾದಲ್ಲಿ ಎಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರಿ(ಚಂದ್ರಶೇಖರ್)ಯ ಆಣತಿ ಮೇರೆಗೆ ಲಂಚ ಸ್ವೀಕರಿಸುತ್ತಿದ್ದ ಮಧ್ಯವರ್ತಿಯನ್ನು ಸಿಬಿಐ ಬಂಧಿಸಿತ್ತು.

ತನಿಖೆಯ ವೇಳೆ ತಾವು ಪಡೆಯುತ್ತಿರುವ ಲಂಚ ಅಧಿಕಾರಿಗೆ ಸೇರಿದ್ದು ಎಂದು ಮಧ್ಯವರ್ತಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂತ್ರಧಾರಿ ಅಧಿಕಾರಿಯನ್ನು ಬಂಧಿಸಿರುವುದಾಗಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next