Advertisement

Cauvery : ರಾತೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು

12:38 AM Aug 31, 2023 | Team Udayavani |

ಮಂಡ್ಯ: ತಮಿಳುನಾಡಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರಕಾರ ಮಂಗಳವಾರ ರಾತ್ರಿಯಿಂದಲೇ 5 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಿದೆ. ಬುಧವಾರ ರಾತ್ರಿ 8 ಗಂಟೆ ವೇಳೆಗೆ ನದಿ ಹಾಗೂ ನಾಲೆಯಿಂದ ಒಟ್ಟು 7,329 ಕ್ಯುಸೆಕ್‌ ನೀರಿನ ಹೊರಹರಿವು ದಾಖಲಿಸಿದೆ. ಇದಕ್ಕೆ ಜಿಲ್ಲೆಯಲ್ಲಿ ಪ್ರತಿರೋಧದ ಕಿಚ್ಚು ಹೆಚ್ಚಾಗಿದೆ.

Advertisement

ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 101.28 ಅಡಿ ನೀರಿದ್ದು, ಪ್ರಸ್ತುತ ಒಳಹರಿವು 2,300 ಕ್ಯುಸೆಕ್‌ ಇದೆ. ಹೊರಹರಿವು 4,400 ಕ್ಯುಸೆಕ್‌ ಆಗಿದೆ. ಪ್ರಾಧಿಕಾರದ ಆದೇಶದಂತೆ 15 ದಿನ ತಮಿಳುನಾಡಿಗೆ 5 ಸಾವಿರ ಕ್ಯುಸೆಕ್‌ ನೀರು ಹರಿಸಿದರೆ ಈ ಭಾಗದ ರೈತರ ಸ್ಥಿತಿ ಚಿಂತಾಜನಕವಾಗಲಿದೆ ಎಂದು ಹಲವು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಸಂಬಂಧ ವಿಚಾರಣೆ ಮತ್ತು ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಗುರುವಾರ ದಿಲ್ಲಿಗೆ ತೆರಳುವರು. ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾದ ಮಂಡನೆ ಸಂಬಂಧ ರಾಜ್ಯದ ವಕೀಲರ ಜತೆ ಚರ್ಚಿಸುವರು.

Advertisement

Udayavani is now on Telegram. Click here to join our channel and stay updated with the latest news.

Next