Advertisement

Madikeri ಅ. 18ರಂದು ಬೆಳಗ್ಗಿನ ಜಾವ 1.27ಕ್ಕೆ ಕಾವೇರಿ ತೀರ್ಥೋದ್ಭವ

01:13 AM Sep 21, 2023 | Team Udayavani |

ಮಡಿಕೇರಿ: ಶ್ರೀ ಕಾವೇರಿ ತುಲಾ ಸಂಕ್ರಮಣದ ಪವಿತ್ರ ಕಾವೇರಿ ತೀರ್ಥೋದ್ಭವ ಪ್ರಸಕ್ತ ಸಾಲಿನ ಅ.18 ರ ಬೆಳಗ್ಗಿನ ಜಾವ 1.27 ಗಂಟೆಗೆ (ಅ.17ರ ಮಧ್ಯರಾತ್ರಿ ಕಳೆದು) ಘಟಿಸಲಿದೆ.

Advertisement

ಕಾವೇರಿಯ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಜಾತ್ರೆಗೆ ಪೂರ್ವಭಾವಿಯಾಗಿ ಸೆ. 27ರಂದು ಬೆಳಗ್ಗೆ 9.29 ಗಂಟೆಗೆ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕಲಾಗುವ ಕಾರ್ಯಕ್ರಮ ಸಂಪ್ರದಾಯದಂತೆ ನಡೆಯಲಿದೆ.

ಅ. 5ರಂದು ಬೆಳಗ್ಗೆ 8.31 ನಿಮಿಷಕ್ಕೆ ಆಜ್ಞಾ ಮೂಹೂರ್ತ, ಅ. 15ರಂದು ಬೆಳಗ್ಗೆ 11.45ಕ್ಕೆ ಅಕ್ಷಯ ಪಾತ್ರೆ ಇರಿಸುವುದು, ಸಂಜೆ 4.05ಕ್ಕೆ ಕಾಣಿಕೆ ಡಬ್ಬಿಗಳನ್ನು ಇಡುವ ಕಾರ್ಯಕ್ರಮಗಳು ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next