Advertisement

Cauvery issue; ನಟ ದರ್ಶನ್‌ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

10:07 AM Sep 26, 2023 | Team Udayavani |

ಮಂಡ್ಯ: ನಟ ದರ್ಶನ್‌ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಯಕ್ರಮವೊಂದ ರಲ್ಲಿ ಕಾವೇರಿ ಹೋರಾಟಕ್ಕೆ ನಟರು ಬರಲ್ಲ ಅಂತೀರಾ. ಆದರೆ ತಮಿಳು ನಟರ ಚಿತ್ರಗಳಿಗೆ ಕೋಟಿ ಕೋಟಿ ಕಲೆಕ್ಷನ್‌ ನೀಡುವಂತೆ ಕನ್ನಡ ಚಿತ್ರಗಳಿಗೆ ನೀಡಿ, ನಂತರ ಕರೆಯಿರಿ. ಆಗ ಎಲ್ಲರೂ ಬರುತ್ತಾರೆ ಎಂದು ಹೇಳಿಕೆ ನೀಡಿರು ವುದು ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನಟ ದರ್ಶನ್‌ ಕೂಡಲೇ ರೈತರ ಕ್ಷಮೆ ಕೇಳಬೇಕು. ನಾವು ಒಂದು ತಿಂಗಳಿನಿಂದ ಹೋರಾಟ ಮಾಡುತ್ತಿದ್ದೇವೆ. ನಟ ದರ್ಶನ್‌ ಬಂದರೆ ಹೋರಾಟಕ್ಕೆ ಬಲ ಸಿಗಲಿದೆ ಎಂದು ಆಹ್ವಾನ ನೀಡಿದ್ದೆವು. ಕಾವೇರಿ ಕೊಳ್ಳದ ಜಿಲ್ಲೆಯವರಾಗಿ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಜವಾಬ್ದಾರಿ ಯುತ ನಟನಾಗಿ ಮಾತನಾಡಬೇಕು. ಕಾವೇರಿ ನೀರು ಕುಡಿಯುವ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

ನಟಿ ಲೀಲಾವತಿ, ಪುತ್ರ ವಿನೋದ್‌ರಾಜ್‌ ಬೆಂಬಲ: ಕಾವೇರಿ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ನಟ ವಿನೋದ್‌ರಾಜ್‌ ಬೆಂಬಲ ವ್ಯಕ್ತಪಡಿಸಿದರು. ಸೋಮವಾರ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಲೀಲಾವತಿ ಹಾಗೂ ವಿನೋದ್‌ರಾಜ್‌ ಕಾವೇರಿಯ ವಿಷಯದಲ್ಲಿ ಕಾವು ಏರದ ಹಾಗೆ ತೀರ್ಪು ಕೊಡಬೇಕು ಎಂದರು. ಚಿತ್ರರಂಗದ ಮೌನ ವಿಚಾರಕ್ಕೆ ಪ್ರತಿಕ್ರಿಯಿಸದೆ ತೆರಳಿದರು.

ಬಿಜೆಪಿ ಕಾರ್ಯಕರ್ತರಿಂದ ಚಡ್ಡಿ ಮೆರವಣಿಗೆ: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಚಡ್ಡಿ ಮೆರವಣಿಗೆ ನಡೆಸಿದರು. ನಗರದ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಪಟಾಪಟಿ ಚಡ್ಡಿ ಧರಿಸಿ ಎತ್ತುಗಳೊಂದಿಗೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಮೂಲಕ ಮೆರವಣಿಗೆಯಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿ ಬಂಬಲ ವ್ಯಕ್ತಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next