Advertisement

Cauvery: ಕರ್ನಾಟಕದ ಮನವಿಗೆ ಮನ್ನಣೆ ಬೇಡ – ತಮಿಳುನಾಡು ಸಿಎಂ ಸ್ಟಾಲಿನ್‌ ಆಗ್ರಹ

11:04 PM Sep 16, 2023 | Team Udayavani |

ಚೆನ್ನೈ: ಕಾವೇರಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸಬೇಕು. ಜತೆಗೆ ನೀರಿನ ವಿಚಾರದಲ್ಲಿ ಆ ರಾಜ್ಯದ ನಿಲುವಿಗೆ ಮನ್ನಣೆ ನೀಡಬಾರದು ಎಂದು ಮನವಿ ಮಾಡಲು ತಮಿಳುನಾಡು ತೀರ್ಮಾನಿಸಿದೆ.

Advertisement

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಸರ್ವಪಕ್ಷಗಳ ಸಂಸದರ ನಿಯೋಗ ನವದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಚೌಹಾಣ್‌ ಅವರನ್ನು ಸದ್ಯದಲ್ಲೇ ಭೇಟಿಯಾಗಲಿದೆ. ಚೆನ್ನೈನಲ್ಲಿ ಶನಿವಾರ ಈ ವಿಚಾರ ತಿಳಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ತಮಿಳುನಾಡಿನ ನೀರಿನ ಬೇಡಿಕೆ ಬಗ್ಗೆ ಕರ್ನಾಟಕ ಸರ್ಕಾರ ಅಸಮಂಜಸ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಹೀಗಾಗಿ, ಅದನ್ನು ಪರಿಗಣಿಸಬಾರದು. ರಾಜ್ಯಕ್ಕೆ ಬರಬೇಕಾಗಿರುವ ನೀರಿನ ಪಾಲು ಸಿಗಲೇಬೇಕು. ಹೀಗಾಗಿ, ಸದ್ಯದಲ್ಲೇ ಜಲಸಂಪನ್ಮೂಲ ಸಚಿವ ದೊರೈಮುರುಗನ್‌ ನೇತೃತ್ವದಲ್ಲಿ ತಮಿಳುನಾಡಿನ ಸರ್ವಪಕ್ಷಗಳ ಸಂಸದರ ನಿಯೋಗ ನವದೆಹಲಿಗೆ ತೆರಳಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next