Advertisement

ಕಾವೇರಿ ವಿವಾದ: ಸಂಪುಟ ಸಭೆ ಕರೆದ ತ.ನಾಡು ಸಿಎಂ

06:25 AM Apr 08, 2018 | Team Udayavani |

ಚೆನ್ನೈ: ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಂತೆಯೇ ಶನಿವಾರ ಸಿಎಂ ಪಳನಿಸ್ವಾಮಿ ಅವರು ಸಂಪುಟ ಸಭೆ ನಡೆಸಿ, ಮುಂದಿನ ಕಾನೂನಾತ್ಮಕ ಹೆಜ್ಜೆಗಳ ಕುರಿತು ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದಾರೆ.

Advertisement

ಡಿಸಿಎಂ ಪನ್ನೀರ್‌ಸೆಲ್ವಂ, ವಿವಿಧ ಇಲಾಖೆಗಳ ಸಚಿವರು, ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರು ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನೊಂದೆಡೆ, ತಮಿಳುನಾಡಿನಾದ್ಯಂತ ಶನಿವಾರವೂ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳಿಂದ ರಸ್ತೆ ತಡೆ, ರೈಲು ತಡೆ, ಪ್ರತಿಭಟನೆಗಳು ನಡೆದಿವೆ. ಇದೇ ವೇಳೆ, ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್‌ ನೇತೃತ್ವದಲ್ಲಿ ಮೆಗಾ ರ್ಯಾಲಿ ಕೂಡ ನಡೆದಿದೆ. ಏತನ್ಮಧ್ಯೆ, ಕಾವೇರಿ ಹೋರಾಟದ ಅಂಗವಾಗಿ ಐಪಿಎಲ್‌ ಪಂದ್ಯಗಳಿಗೆ ವಿರೋಧ ವ್ಯಕ್ತಪಡಿಸಿರುವ ನಮ್‌ ತಮಿಳರ್‌ ಕಚ್ಚಿ ನಾಯಕ ಸೀಮನ್‌ ಅವರು, ಒಂದೋ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಗೊಳಿಸಬೇಕು. ಇಲ್ಲದಿದ್ದರೆ ಯಾರಿಗೂ ಸ್ಟೇಡಿಯಂ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next