Advertisement

Cattle smuggling: ವೇಣೂರು; ಜಾನುವಾರು ಅಕ್ರಮ ಸಾಗಾಟ

09:42 PM Mar 30, 2024 | Team Udayavani |

ಬೆಳ್ತಂಗಡಿ: ಬಜಿರೆ ಗ್ರಾಮದ ಬಾಡಾರು ಶಾಂತಿರೊಟ್ಟು ಎಂಬಲ್ಲಿ  ಗೂಡ್ಸ್‌ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಘಟನೆ ಮಾ.30ರಂದು ನಡೆದಿದೆ.

Advertisement

ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ವೇಣೂರು- ನೈನಾಡು ಸಾರ್ವಜನಿಕ ರಸ್ತೆಯಲ್ಲಿ ಸಂಜೆ 5ಗಂಟೆ ಸುಮಾರಿಗೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ನೈನಾಡು ಕಡೆಯಿಂದ ವೇಣೂರು ಕಡೆಗೆ ಗೂಡ್ಸ್‌ ವಾಹನ ತಡೆದಾಗ ಚಾಲಕ ವಾಹನವನ್ನು ನಿಲ್ಲಿಸದೆ ವೇಣೂರು ಕಡೆಗೆ ಚಲಾಯಿಸಿದ್ದ. ಪೊಲೀಸರು ಹಿಂಬಾಲಿಸಿ 4 ಕಿ.ಮೀ. ದೂರ ಶಾಂತಿರೊಟ್ಟು ಎಂಬಲ್ಲಿ ವಾಹನ ಅಡ್ಡಹಾಕಿದಾಗ ಚಾಲಕ ಹಾಗೂ ಇನ್ನೋರ್ವ ಓಡಿ ಹೋಗಿದ್ದಾರೆ.

ವಾಹನವನ್ನು ಪರಿಶೀಲಿಸಿದಾಗ 1 ಎತ್ತು ಹಾಗೂ 3 ಹಸು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕೆ.ಎ.21 ಬಿ.1902 ಸಂಖ್ಯೆಯ ನೋಂದಾಯಿತ ವಾಹನವನ್ನು  ಸ್ವಾದೀನಪಡಿಸಲಾಗಿದೆ. ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ 80,000 ರೂ. ಹಾಗೂ ವಾಹನದ ಅಂದಾಜು ಮೌಲ್ಯ 2,00,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಠಾಣೆಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next