Advertisement

Politics: ಗೆದ್ದರೆ ಜಾತಿಗಣತಿ: ರಾಹುಲ್‌ ಗಾಂಧಿ

11:06 PM Sep 25, 2023 | Team Udayavani |

ನವದೆಹಲಿ: ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಛತ್ತೀಸ್‌ಗಡದಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸಲಾಗುವುದು. ಆಗ ಮಾತ್ರ ಒಬಿಸಿಗಳು, ದಲಿತರು, ಬುಡಕಟ್ಟು ಜನ ಮತ್ತು ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಲು ಸಾಧ್ಯ’ ಎಂದಿದ್ದಾರೆ.

Advertisement

ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಜಾತಿಗಣತಿಯನ್ನು ಪ್ರಧಾನಿ ಮೋದಿಯವರು ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಈ ಪ್ರಕ್ರಿಯೆ ಬಗ್ಗೆ ಪ್ರಧಾನಿಗೆ ಭಯವೇ ಎಂದೂ ಕೇಳಿದ್ದಾರೆ. ಇದಕ್ಕೂ ಮುನ್ನ, ಬಿಲಾಸ್‌ಪುರದಿಂದ ರಾಯು³ರವರೆಗೆ ರಾಹುಲ್‌ ರೈಲಿನಲ್ಲಿ ಸಂಚರಿಸಿದ್ದು, ನಾನ್‌-ಎಸಿ ಮತ್ತು ಜನರಲ್‌ ಬೋಗಿಯಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಾ ಸಾಗಿದ್ದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next