Advertisement

ಧರ್ಮದ ಆಧಾರದ ಮೇಲೆ ಗೋಹತ್ಯೆ ನಿಷೇಧ: ರಾಯರಡ್ಡಿ

02:11 PM May 29, 2017 | Team Udayavani |

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ.
ಇದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ತರೀಕೆರೆ ತಾಲೂಕು ಗೊಂಡೇದಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಸಾಹಾರ ಒಂದು ಆಹಾರ ಪದ್ಧತಿ. ಹಾಗೆಯೇ ಗೋ ಮಾಂಸ ಕೆಲವರ ಆಹಾರ ಪದ್ಧತಿಯಾಗಿದೆ. ಆಹಾರ ಅವರವರ ಇಷ್ಟ. ಒದೊಂದು ಸಮುದಾಯದ ಆಹಾರ ಪದ್ಧತಿ ಬೇರೆ ಬೇರೆಯಾಗಿರುತ್ತದೆ. ಇದರ ಮೇಲೆ ನಿಷೇಧ ಹೆರೋದು ಸರಿಯಲ್ಲ . ಹೀಗೆ ಹಲವು ವ್ಯತಿರಿಕ್ತ ಪರಿಣಾಮಗಳನ್ನುಂಟುಮಾಡುವ ಗೋ ಹತ್ಯೆ ನಿಷೇಧ ಕಾಯ್ದೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next