Advertisement

ಅಂಬಾಲಾ: ಡೇರಾ ಹಿಂಸೆಗೆ ಬಳಕೆಯಾಗಲಿದ್ದ 38 ಲಕ್ಷ ರೂ. ನಗದು ವಶ

03:50 PM Aug 28, 2017 | Team Udayavani |

ಚಂಡೀಗಢ : ಡೇರಾ ಹಿಂಸೆ ಭುಗಿಲೇಳಿಸಲು ಬಳಕೆಯಾಗಲಿದ್ದ ಸುಮಾರು 38 ಲಕ್ಷ ರೂ. ನಗದನ್ನು ಅಂಬಾಲಾ ಜಿಲ್ಲೆಯಲ್ಲಿನ ಡೇರಾ ಸಚ್ಚಾ ಸೌದಾ ಬೆಂಬಲಿಗನ ಮನೆಯಿಂದ ಹರಿಯಾಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಳಿಕ ಮನೆಯೊಡೆಯ, ಡೇರಾ ಹಿಂಬಾಲಕ, ಜೈ ರಾಮ್‌ ಪರಾರಿಯಾಗಿದ್ದಾನೆ. 

Advertisement

ಅಂಬಾಲಾ ಜಿಲ್ಲೆಯ ಮುಲ್ಲಾನ ಎಂಬಲ್ಲಿ ಡೇರಾ ಹಿಂಬಾಲಕ ಜೈರಾಮ್‌ ಎಂಬಾತನ ಮನೆಯಿಂದ 38 ಲಕ್ಷ ರೂ. ನಗದನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂದು ಅಂಬಾಲಾ ಎಸ್‌ಪಿ ಅಭಿಷೇಕ್‌ ಜೋರ್ವಾಲ್‌ ತಿಳಿಸಿದ್ದಾರೆ. 

ಉಪ್ಲಾನಾ ಗ್ರಾಮದ ನಿವಾಸಿ ಅಶೋಕ್‌ ಕುಮಾರ್‌ ಎಂಬವರು ನೀಡಿದ ಮಾಹಿತಿಯನ್ನು ಅನುಸರಿಸಿ ಜೈರಾಮ್‌ ಮನೆಯಲ್ಲಿದ್ದ ಅಕ್ರಮ 38 ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳಲಾಯಿತು ಎಂದು ಜೋರ್ವಾಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next