Advertisement

ಪೆರಾಜೆ: ಮನೆಯಿಂದ ಲಕ್ಷಾಂತರ ಮೌಲ್ಯದ ನಗ, ನಗದು ಕಳವು

09:17 AM Jul 04, 2019 | keerthan |

ವಿಟ್ಲ : ಮಾಣಿ ಸಮೀಪದ ಗಡಿಯಾರದಲ್ಲಿ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳವು ಮಾಡಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

Advertisement

ರಾಷ್ಟ್ರೀಯ ಹೆದ್ದಾರಿ 75ರ ಗಡಿಯಾರ ಸಮೀಪದ ಜೋಗಿಬೆಟ್ಟಿನಲ್ಲಿರುವ ಮಹಮ್ಮದ್‌ ರಫೀಕ್‌ ಅವರ ಬಾಡಿಗೆ ಮನೆಯಲ್ಲಿ ಕಳವು ನಡೆದಿದೆ.
ಮಹಮ್ಮದ್‌ ಅವರು ಹಂಝ ಎಂಬವರ ಬಾಡಿಗೆ ಮನೆಯಲ್ಲಿ ಕುಟುಂಬ ಸಹಿತ ವಾಸವಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆಗೆ ಮನೆಯವರೆಲ್ಲರೂ ಉಪ್ಪಿನಂಗಡಿಯ ಶಾಂತಿನಗರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಬೆಳಗ್ಗೆ ಬಂದಾಗ ಕಳವು ನಡೆದಿರುವುದು ತಿಳಿಯಿತು.

ಕಪಾಟಿನಲ್ಲಿದ್ದ ಚಿನ್ನದ ಬಳೆ, ನೆಕ್ಲೇಸ್‌, ಬ್ರಾಸ್ಲೇಟ್‌, ಉಂಗುರ ಸಹಿತ ಅಂದಾಜು 31 ಪವನ್‌ ಚಿನ್ನ ಹಾಗೂ 1.95 ಲ. ರೂ. ಅನ್ನು ಕದ್ದೊಯ್ಯಲಾಗಿದೆ ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಂತ ಮನೆ ಕಟ್ಟುವ ಉದ್ದೇಶದಿಂದ ಚಿನ್ನ ಹಾಗೂ ಹಣವನ್ನು ಸಂಗ್ರಹಿಸಿಡಲಾಗಿತ್ತು.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next