Advertisement

ಡಿ.ಎಚ್‌.ಶಂಕರಮೂರ್ತಿ ವಿರುದ್ದ ಪ್ರಕರಣ ರದ್ದು

09:37 AM Dec 16, 2018 | |

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ಶನಿವಾರ ರದ್ದುಪಡಿಸಿದೆ. ಪ್ರಕರಣದ ವಿಚಾರಣೆ ಸುದೀರ್ಘ‌ವಾಗಿ ನಡೆದ ವೇಳೆ ಶಂಕರಮೂರ್ತಿ ಪರ ವಕೀಲ ವಿನೋದ್‌ಕುಮಾರ್‌ ವಾದ ಮಂಡಿಸಿ, ಶಂಕರಮೂರ್ತಿಯವರು ಚುನಾವಣಾಧಿಕಾರಿಗಳ ಕಚೇರಿವರೆಗೆ ಕಾರಿನಲ್ಲಿ ಆಗಮಿಸಿದ್ದರೂ, ನಾಮಪತ್ರ ಸಲ್ಲಿಕೆ ಸ್ಥಳಕ್ಕೆ ನಡೆದೇ ಹೋಗಿದ್ದರು. ಕಾರಿನ ಚಾಲಕ ವಾಹನವನ್ನುಚುನಾವಣಾಧಿಕಾರಿಗಳ ಆವರಣದಲ್ಲಿ ಪಾರ್ಕಿಂಗ್‌ ಮಾಡಿದ್ದರೆಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

Advertisement

ಇದನ್ನು ಪುರಸ್ಕರಿಸಿದ ನ್ಯಾ.ದಿನೇಶ್‌ಕುಮಾರ್‌ ಅವರಿದ್ದ ನ್ಯಾಯಪೀಠ, ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿ, ಆದೇಶ ಹೊರಡಿಸಿತು. 2010ರಲ್ಲಿ ವಿಧಾನ ಪರಿಷತ್‌ಗೆ ನಡೆದ ಚುನಾವಣೆ ವೇಳೆ ದಕ್ಷಿಣ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಂಕರಮೂರ್ತಿ ಹಾಜರಿದ್ದರು.

ಅಲ್ಲಿಗೆ ಆಗಮಿಸುವಾಗ ಸರ್ಕಾರಿ ಕಾರು ಬಳಸಿದ್ದರಿಂದ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿಯವರು ಶಂಕರಮೂರ್ತಿ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ನಡೆದ ವೇಳೆ ಶಂಕರಮೂರ್ತಿಯವರು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಸಲು ಕಾರನ್ನು ಚುನಾವಣಾಧಿಕಾರಿಗಳ ಕಚೇರಿಯ ಆವರಣಕ್ಕೆ ತಂದಿದ್ದರು ಎಂದು ದೂರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next