Advertisement

ಶಿವಮೊಗ್ಗದಲ್ಲಿ ರಸ್ತೆಗಿಳಿದರೆ ಲಾಠಿ ಏಟಿನಿಂದ ವಿನಾಯತಿ; ಆದರೆ ಕೇಸ್ ಮಾತ್ರ ಗ್ಯಾರಂಟಿ

09:42 AM Mar 28, 2020 | keerthan |

ಶಿವಮೊಗ್ಗ: ಲಾಕ್ ಡೌನ್ ಮತ್ತು ಸಿಆರ್ ಪಿಸಿ 144 ಸೆಕ್ಷನ್ ನಿಯಮ‌ ಉಲ್ಲಂಘಿಸಿ ರಸ್ತೆಗೆ ಬರುವ ಸಾರ್ವಜನಿಕರಿಗೆ ಕಳೆದೆರಡು ದಿನಗಳಿಂದ ನೀಡಲಾಗುತ್ತಿದ್ದ ಲಾಠಿ ಏಟಿನಿಂದ ಇಂದು ವಿನಾಯತಿ ನೀಡಲಾಗಿದೆ. ಆದರೆ ಅಂಥವರ ಮೇಲೆ ಪ್ರಕರಣ ಮಾತ್ರ ದಾಖಲಾಗುತ್ತಿದೆ.

Advertisement

ಹೌದು ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ರಸ್ತೆಗೆ ಬರುವವರಿಗೆ ಲಾಠಿ ಏಟಿನಿಂದ ವಿನಾಯ್ತಿ ನೀಡಲಾಗಿದೆ. ಆದರೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಕಾನೂನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡುತ್ತಿರುವವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಿದ್ದಾರೆ.

ಶಿವಮೊಗ್ಗ ಗಾಂದಿ ಬಜಾರ್ ನಲ್ಲಿ ಕಾನೂನು ಉಲ್ಲಂಘಿಸಿ ಓಡಾಡುತ್ತಿದ್ದ ನಾಸಿಕ್, ರಿಜ್ವಾನ್ ಖಾನ್, ರಿಯಾಜ್ ಅಹಮದ್, ಆನಂದ ಎಂಬುವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಹೊಳೆಹೊನ್ನೂರು ಗ್ರಾಮದಲ್ಲಿ ಕಾನೂನು ಉಲ್ಲಂಘಿಸಿದ ನೇತ್ರಪ್ಪ, ದೇವಾ, ಪಾಪು, ವಿಶ್ವಾಸ, ಪ್ರಮೋದ ಎಂಬವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next