Advertisement

ಅವಮಾನಕರ ರೀತಿಯಲ್ಲಿ ಪ್ರಧಾನಿ ಮೋದಿ ಪೋಟೊ ಫೇಸ್ ಬುಕ್ ನಲ್ಲಿ‌ ಶೇರ್ ಮಾಡಿದವರ ವಿರುದ್ದ ಕೇಸ್

05:22 PM Jun 27, 2020 | keerthan |

ಗಂಗಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೋಟೊಗೆ ಸೀರೆಯುಡಿಸಿದಂತೆ ಎಡಿಟ್ ಮಾಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

Advertisement

ಬಿಜೆಪಿ ಕೊಪ್ಪಳ ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯದರ್ಶಿ ಶಿವಪ್ಪ ಮಾದಿಗ ತಾಲೂಕು ಅಧ್ಯಕ್ಷ ಬಸವರಾಜ ಮಾದಿಗ ನಗರಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಇಸ್ಲಾಂಪೂರ ಗಂಜ್ ಏರಿಯಾದ ಗೋಡೌನ್ ಹತ್ತಿರದ ವಾಸವಾಗಿರುವ ನಹೀಮ್ ಅಹಮದ್ ಎಂಬ ವ್ಯಕ್ತಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫೋಟೊವನ್ನು ಸೀರೆಯುಡಿಸಿದಂತೆ ಎಡಿಟ್ ಮಾಡಿ ಆಕಾಶ ಎನ್ ಜಿ ಎನ್ನುವ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದನ್ನು ನಹೀಮ್ ಅಹಮದ್ ಶೇರ್ ಮಾಡಿದ್ದಾರೆ.

ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರಿಗೆ ಅವಮಾನವಾಗುವಂತಹ ರೀತಿಯಲ್ಲಿ ನಡೆದುಕೊಂಡಿರುವ ಆಕಾಶ ಎನ್.ಜಿ ಹಾಗೂ ನಹೀಮ್ ಅಹಮದ್ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಎಸ್ಸಿ ಮೋರ್ಚಾ ಮುಖಂಡರಾದ ಶಿವಪ್ಪ ಮಾದಿಗ,ಬಸವರಾಜ ಮಾದಿಗ ದೂರು ನೀಡಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next