Advertisement

ಗಿರಿಗಿಟ್ ಸಿನಿಮಾದ ಬೋಳಾರ್ ಪಾತ್ರದ ಬಗ್ಗೆ ವಕೀಲರ ಸಂಘದ ಆಕ್ರೋಶ; ಕೇಸು ದಾಖಲು

10:03 AM Sep 13, 2019 | keerthan |

ಸುರತ್ಕಲ್: ಇತ್ತೀಚೆಗೆ ತೆರೆಕಂಡ ತುಳು ಚಿತ್ರ ‘ಗಿರಿಗಿಟ್’ ನಲ್ಲಿ ನ್ಯಾಯಾಂಗ ಮತ್ತು ವಕೀಲರಿಗೆ ಅವಹೇಳನ ಮಾಡಿದ್ದಾರೆ ಎಂದು ವಕೀಲರ ಸಂಘದ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಂಗಳೂರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಗಿರಿಗಿಟ್ ಚಿತ್ರದಲ್ಲಿ ನ್ಯಾಯಾಂಗ ಮತ್ತು ವಕೀಲರನ್ನು ತುಚ್ಚವಾಗಿ ತೋರಿಸಿ ನಿಂದನೆ ಮಾಡಲಾಗಿದೆ. ಇದರಿಂದ ನ್ಯಾಯಾಂಗಕ್ಕೆ ಮತ್ತು ವಕೀಲರ ಗೌರವಕ್ಕೆ ಧಕ್ಜೆಯಾಗಿದೆ ಎಂದು ಮಂಗಳೂರು ಬಾರ್ ಎಸೋಸಿಯೇಷನ್ ಆರೋಪಿಸಿದೆ. ಇದೀಗ ಚಲನಚಿತ್ರದ ವಿರುದ್ದ ಕೇಸು ದಾಖಲು ಮಾಡಲಾಗಿದೆ ಎಂದು ಕಾರ್ಯದರ್ಶಿ ರಾಘವೇಂದ್ರ ಎಚ್ ವಿ.ಹೇಳಿದ್ದಾರೆ.

ಗಿರಿಗಿಟ್ ಚಿತ್ರದಲ್ಲಿ ಖ್ಯಾತ ಹಾಸ್ಯನಟ ಅರವಿಂದ್ ಬೋಳಾರ್ ವಕೀಲ ಪಾತ್ರದಲ್ಲಿ ನಟಿಸಿದ್ದರು. ರೂಪೇಶ್ ಶೆಟ್ಟಿ ನಟಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next