Advertisement

ಸಿಎಂ ಪಳನಿಗೆ ಅವಹೇಳನ ವ್ಯಂಗ್ಯಚಿತ್ರಕಾರನ ಬಂಧನ

06:05 AM Nov 06, 2017 | Team Udayavani |

ತಿರುನಲ್ವೇಲಿ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಜಿಲ್ಲಾಧಿಕಾರಿ ಸಂದೀಪ್‌ ನಂದೂರಿ ಹಾಗೂ ನಗರ ಪೊಲೀಸ್‌ ಮುಖ್ಯಸ್ಥರನ್ನು ಅವಹೇಳನಕಾರಿ ಚಿತ್ರಿಸಿ, ವ್ಯಂಗ್ಯಚಿತ್ರ ಬಿಡಿಸಿದ ಕಾರಣಕ್ಕೆ ಬಾಲಾ ಜಿ.(36) ಎಂಬ ಹವ್ಯಾಸಿ ವ್ಯಂಗ್ಯಚಿತ್ರಕಾರನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ನೀಡಿದ ದೂರಿನ ಮೇರೆಗೆ ಈ ಕ್ರಮ ಜರುಗಿಸಲಾಗಿದೆ. ಸಾಲಗಾರರ ಕಾಟ ತಾಳಲಾಗದೆ ಕುಟುಂಬವೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಸನ್ನಿವೇಶವನ್ನು ಇಟ್ಟುಕೊಂಡು, ಸರ್ಕಾರಿ ಆಡಳಿತಯಂತ್ರವನ್ನು ಅಣಕಿಸುವ ರೀತಿಯಲ್ಲಿ ವ್ಯಂಗ್ಯಚಿತ್ರ ಬಿಡಿಸಿ, ಬಾಲಾ ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. “ಸಜೀವ ದಹನವಾಗುತ್ತಿರುವ ಮಗುವನ್ನು ಬೆತ್ತಲಾಗಿರುವ ಸಿಎಂ ಪಳನಿ, ಜಿಲ್ಲಾಧಿಕಾರಿ ನಂದೂರಿ ಮತ್ತು ಪೊಲೀಸ್‌ ಮುಖ್ಯಸ್ಥರು ನೋಡುತ್ತಿರುವ’ ವ್ಯಂಗ್ಯಚಿತ್ರ ಇದಾಗಿದೆ. ಬಾಲಾ ಅವರ ಬಂಧನವನ್ನು ಹಲವು ಸಂಘಟನೆಗಳು ಖಂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next