Advertisement

ಕೂಲಿ ಕಾರ್ಮಿಕರಿಗೆ ಕಾರ್ಡ್‌ ವಿತರಣೆ

12:50 PM Jun 01, 2018 | |

ಯಾದಗಿರಿ: ಕಾರ್ಮಿಕರ ಕಾರ್ಡ್‌ಗಳನ್ನು ನೈಜ ಕೂಲಿ ಕಾರ್ಮಿಕರ ಮನೆ ಬಾಗಲಿಗೆ ತಲುಪಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಕಾರ್ಯ ಮೆಚ್ಚುವಂತಹದ್ದು ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಶ್ಲಾಘಿಸಿದರು.

Advertisement

ಗುರುಮಠಕಲ್‌ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ಮಾತಾ ಮಾಣೀಕೇಶ್ವರಿ ಆಶ್ರಮದಲ್ಲಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಅರ್ಹ ಫಲಾನುಭವಿಗಳಿಗೆ ಅವರ ಮನೆ ಬಾಗಿಲಿಗೆ ಸರ್ಕಾರಿ ಶುಲ್ಕದಲ್ಲಿಯೇ ನೀಡಲಾದ ಸರ್ಕಾರಿ ಕಾರ್ಮಿಕ ಕಾರ್ಡ್‌ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು. ಕೂಲಿ ಕಾರ್ಮಿಕರನ್ನು ಇಂದು ಮಧ್ಯವರ್ತಿಗಳು, ದಲ್ಲಾಳಿಗಳು ಸುಲಿಗೆ ಮಾಡುತ್ತಿದ್ದು, ಇದನ್ನು ತಡೆಯಲು ಸಂಘದ ವತಿಯಿಂದ ಕಾರ್ಡ್‌ ವಿತರಣೆ ಹಮ್ಮಿಕೊಂಡಿರುವುದು ಮಾದರಿಯಾಗಿದೆ. 

175 ರೂಪಾಯಿಗೆ ದೊರಕುವ ಕಾರ್ಡ್‌ನ್ನು ಕೊಡಿಸುವುದಾಗಿ ದಲ್ಲಾಳಿಗಳು ಮತ್ತು ಕೆಲವು ಸಂಘಟನೆಗಳು ಕಾರ್ಮಿಕರಿಂದ 2000 ರೂ. ವರೆಗೆ ವಸೂಲಿ ಮಾಡಿ ಕಿತ್ತು ತಿನ್ನುವ ಘಟನೆಗಳು ಸಾಕಷ್ಟು ನಡೆಯುತ್ತಿದ್ದುದನ್ನು ಕಂಡು ಈ ನಿರ್ಣಯಕ್ಕೆ ಬರಲಾಯಿತು ಎಂದರು. ಇನ್ನು ಮುಂದೆ ನಿರಂತರವಾಗಿ ಈ ಕಾರ್ಯಕ್ರಮ ನಡೆಸಲಾಗುವುದು ಎಂದು
ತಿಳಿಸಿದ ಅವರು, ಕಾರ್ಮಿಕರ ಶೋಷಣೆ ಕಂಡು ಬಂದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಇಲ್ಲವೇ ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಮಹಾದೇವ, ಭೀಮು, ಶರಣಪ್ಪ, ಶಿವಪ್ಪ ಹಾಗೂ ಕೂಲಿ ಕಾರ್ಮಿಕ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next