Advertisement

ಧಾರಾಕಾರ ಮಳೆ; ಸೇತುವೆ ದಾಟುವ ವೇಳೆ ಕೊಚ್ಚಿ ಹೋದ ಕಾರು, 3 ಸಾವು, ಮೂವರು ನಾಪತ್ತೆ

11:06 AM Jul 13, 2022 | Team Udayavani |

ನಾಗ್ಪುರ್: ಭಾರೀ ಮಳೆಯ ಪರಿಣಾಮ ಸೇತುವೆಯ ಮೇಲೆ ತೆರಳುತ್ತಿದ್ದ ಕಾರು ಕೊಚ್ಚಿಕೊಂಡು ಹೋಗಿದ್ದು, ಮೂವರು ಸಾವನ್ನಪ್ಪಿರುವ ಘಟನೆ ನಾಗ್ಪುರ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಉಡುಪಿ: ಕಡಲ್ಕೊರೆತ ತಡೆಗೆ ನವ ತಂತ್ರಜ್ಞಾನ; ಸಿಎಂ ಬೊಮ್ಮಾಯಿ

ಸೇತುವೆ ಮೇಲೆ ಕಾರು ತೆರಳುತ್ತಿದ್ದಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ನೂರಾರು ಜನರು ಅಕ್ಕ-ಪಕ್ಕ ನಿಂತು ನೋಡುತ್ತಿದ್ದರು. ಇನ್ನು ಕೆಲವರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದು, ಯಾರೊಬ್ಬರು ರಕ್ಷಿಸುವ ಗೋಜಿಗೆ ಹೋಗಿಲ್ಲ ಎಂದು ವರದಿ ವಿವರಿಸಿದೆ.

ಕಾರು ಸೇತುವೆಯಿಂದ ಕೆಳಕ್ಕೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆಯಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸೇತುವೆಯ ಎರಡೂ ಭಾಗಗಳಲ್ಲಿ ತಡೆಬೇಲಿ ಇಲ್ಲದ ಪರಿಣಾಮ ನೀರು ಸೇತುವೆ ಮೇಲಿಂದ ರಭಸವಾಗಿ ಹರಿದು ಹೋಗುತ್ತಿತ್ತು. ಈ ವೇಳೆ ಎಂಟು ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಎಸ್ ಯುವಿ ಕೊಚ್ಚಿಕೊಂಡು ನದಿಗೆ ಬಿದ್ದಿತ್ತು ಎಂದು ವರದಿ ವಿವರಿಸಿದೆ.

Advertisement

ಮೂವರು ಶವ ಪತ್ತೆಯಾಗಿದ್ದು, ಇನ್ನೂ ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next