Advertisement

ಕಾರು -ರಿಕ್ಷಾ ಢಿಕ್ಕಿ: ಇಬ್ಬರ ಸಾವು

12:47 AM Apr 09, 2019 | Team Udayavani |

ಬಂಟ್ವಾಳ: ಸಜೀಪಪಡು ಗ್ರಾಮದ ಕಂಚಿಲದಲ್ಲಿ ಸೋಮ ವಾರ ಕಾರು ಮತ್ತು ರಿಕ್ಷಾ ಮುಖಾಮುಖೀ ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕರಾಗಿದ್ದ ಸಹೋದರಿಯರಿಬ್ಬರು ಆಸ್ಪತ್ರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಗಂಭೀರವಾಗಿ ಗಾಯಗೊಂಡಿರುವ ಚಾಲಕರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮಂಚಿ ನಿವಾಸಿಗಳಾದ ಜೈನಬಾ (45) ಹಾಗೂ ಜೋಹರಾ (55) ಮೃತಪಟ್ಟವರು. ರಿಕ್ಷಾ ಚಾಲಕ ಮಂಚಿ ನಿವಾಸಿ ಆಶ್ರಫ್‌ ಹಾಗೂ ಕಾರು ಚಾಲಕ ಮಹಮ್ಮದ್‌ ಸಿರಾಜ್‌ ಗಾಯ ಗೊಂಡವರು.

ಅಸೌಖ್ಯದಿಂದಿದ್ದ ಜೋಹರಾರನ್ನು ಜೈನಬಾ ಅವರು ಮಂಚಿಯ ರಿಕ್ಷಾದಲ್ಲಿ ಚೇಲೂರಿನಲ್ಲಿರುವ ವೈದ್ಯರ ಬಳಿಗೆ ಕರೆದೊಯ್ಯು ತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಾರು ಬೇರೊಂದು ವಾಹನವನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ರಿಕ್ಷಾಕ್ಕೆ ಢಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮೆಲ್ಕಾರ್‌ ಸಂಚಾರ ಠಾಣೆ ಎಸ್‌ಐ ಮಂಜುನಾಥ್‌ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next