Advertisement

ಪುಂಜಾಲಕಟ್ಟೆ ತಿರುವಿನಲ್ಲಿ ಮಗುಚಿ ಬಿದ್ದ ಕಾರು: ಪತ್ನಿ ಸಾವು, ಪತಿ ಗಂಭೀರ

10:15 AM Feb 26, 2020 | keerthan |

ಪುಂಜಾಲಕಟ್ಟೆ: ತಿರುವಿನಲ್ಲಿ ಕಾರೊಂದು ಮಗುಚಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಬಂಟ್ವಾಳ- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಸಮೀಪ ಸೋಮವಾರ ತಡರಾತ್ರಿ ನಡೆದಿದೆ.

Advertisement

ಪುಂಜಾಲಕಟ್ಟೆ ಶ್ರೀ ರಾಮ ನಗರ ಭಜನಾ ಮಂದಿರ ಬಳಿ ತಿರುವಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು ರಸ್ತೆಯಿಂದ ಕೆಳಕ್ಕೆ ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದ ಪತಿ ಗಂಭೀರ ಗಾಯಗೊಂಡಿದ್ದು, ಪತ್ನಿ ಸಾವಿಗೀಡಾಗಿದ್ದಾರೆ.

ಅಪಘಾತದಲ್ಲಿ ಬಂಟ್ವಾಳ ತಾ. ತೆಂಕಕಜೆಕಾರು ಗ್ರಾಮ ಕರ್ಲ ನಿವಾಸಿ, ನಿವೃತ್ತ ಯೋಧ, ನಿವೃತ್ತ ಸ್ಟೇಟ್ ಬ್ಯಾಂಕ್ ಉದ್ಯೋಗಿ ಸದಾನಂದ ಅವರು ಗಂಭೀರ ಗಾಯಗೊಂಡಿದ್ದು, ಅವರ ಪತ್ನಿ ಇಂದಿರಾ (58) ಮೃತ ಪಟ್ಟಿದ್ದಾರೆ.

ಪತಿ- ಪತ್ನಿ ಇಬ್ಬರೂ ಕಾಶಿಪಟ್ನದಲ್ಲಿರುವ ಮಗಳ ಮೈದುನನ ವಿವಾಹ ಮದರಂಗಿ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗಿ ಬರುವಾಗ ರಾತ್ರಿ ಸುಮಾರು 11.30ರ ಹೊತ್ತಿಗೆ ಪುಂಜಾಲಕಟ್ಟೆ ಭಜನಾ ಮಂದಿರ ಬಳಿ ಈ ಘಟನೆ ನಡೆದಿದೆ. ಆದರೆ ಕಾರು ರಸ್ತೆಯಿಂದ ತೀರ ಕೆಳಗೆ ಉರುಳಿ ಬಿದ್ದಿದ್ದು ಮೊದಲು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.

Advertisement

ನಂತರ ಹತ್ತಿರದ ಮನೆಯವರು ಗಮನಿಸಿ ಊರವರನ್ನು ಸೇರಿಸಿ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ನಲ್ಲಿ ಬಂಟ್ವಾಳ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯೆ ಇಂದಿರಾ ಅವರು ಮೃತ ಪಟ್ಟಿದ್ದಾರೆ. ಸದಾನಂದ ಅವರನ್ನು ಹೆಚ್ಚಿನ‌ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಪುಂಜಾಲಕಟ್ಟೆ ಪೊಲೀಸು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next