Advertisement

ತವರೂರಿನಿಂದ ಬರುತ್ತಿದ್ದವರಿಗೆ ಅಡ್ಡಿಯಾದ ಜವರಾಯ: ಕಾರು- ಸ್ಕೂಟರ್ ಅಪಘಾತದಲ್ಲಿ ಮೂವರು ಸಾವು

08:35 AM Dec 11, 2020 | keerthan |

ಮೈಸೂರು: ಕಾರು- ಸ್ಕೂಟರ್ ಮುಖಾಮುಖಿ ಢಿಕ್ಕಿಯಾಗಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು- ಬೆಂಗಳೂರು ರಸ್ತೆ ರಿಂಗ್‌ರೋಡ್ ಜಂಕ್ಷನ್ ಬಳಿ ಗುರುವಾರ ತಡರಾತ್ರಿ ನಡೆದಿದೆ.

Advertisement

ಮೈಸೂರಿನ ಟಿ.ಕೆ.ಲೇಔಟ್ ನಿವಾಸಿಗಳಾದ ರಮೇಶ್ (40), ಉಷಾ (36), ಮೋನಿಷಾ (05) ಮೃತ ದುರ್ದೈವಿಗಳು. ಅಪಘಾತದಲ್ಲಿ ಮೂರು ವರ್ಷದ ಮಗು ಸಿದ್ದಾರ್ಥ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಅಧ್ಯಾದೇಶ ಮಾರ್ಗ?; ವಿಧಾನ ಪರಿಷತ್‌ನಲ್ಲಿ ಮಂಡನೆಯಾಗದ ಗೋಹತ್ಯೆ ನಿಷೇಧ ಮಸೂದೆ

ಇಬ್ಬರು ಮಕ್ಕಳೊಂದಿಗೆ ಉಷಾ ತವರೂರು ಸಿದ್ದಲಿಂಗಪುರಕ್ಕೆ ಮಕ್ಕಳೊಂದಿಗೆ ಹೋಗಿದ್ದರು. ಅಲ್ಲಿಂದ ಮರಳಿ ಬರುತ್ತಿದ್ದಾಗ ಗುರುವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.

ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next