Advertisement

ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ: ಮೂವರು ಪೊಲೀಸ್ ವಶಕ್ಕೆ

01:40 PM Jan 30, 2022 | Team Udayavani |

ಚಿಕ್ಕಮಗಳೂರು : ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

Advertisement

ಶನಿವಾರ ಸಂಜೆ ಹೆಗ್ತೂರಿನಲ್ಲಿ ಕಾರು ಚಾಲಕ ವಿಜೇತ (26) ಆತ್ಮಹತ್ಯೆಗೆ ಶರಣಾಗಿದ್ದರು. ಬೋಗಸ್ ಹಕ್ಕುಪತ್ರಗಳನ್ನು ನೀಡಿ ಜನರಿಗೆ ವಂಚಿಸಿದ್ದ ತಹಶೀಲ್ದಾರ್ ಅಂಬುಜಾ ಎಸಿಬಿ ದಾಳಿ ನಡೆದು ಜೈಲು ಸೇರಿದ್ದರು.ಈ ಬೆಳವಣಿಗೆ ಮಧ್ಯೆಯೇ ಕಾರುಚಾಲಕ. ಆತ್ಮಹತ್ಯೆ ಮಾಡಿಕೊಂಡಿದ್ದ.ಸದ್ಯ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಭ್ರಷ್ಟ ಅಧಿಕಾರಿಗಳ ಹಣದಾಹಕ್ಕೆ ಅಮಾಯಕ ಬಲಿ ?; ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ!

ಮೃತ ಚಾಲಕನ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು ಈ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಭೇಟಿ ನೀಡಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸುವಂತೆ ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next