Advertisement

ಸೇತುವೆಗೆ ಕಾರು ಢಿಕ್ಕಿ: ದ.ಕ. ಯುವಕನ ಸಹಿತ ಮೂವರ ಸಾವು 

01:00 AM Feb 27, 2019 | Harsha Rao |

ಶಿರಾ: ರಾಷ್ಟ್ರೀಯ ಹೆದ್ದಾರಿ 48ರ ಶಿರಾ-ಹಿರಿಯೂರಿನ ಮನಂಗಿ ಸೇತುವೆ ಬಳಿ ಮಂಗಳವಾರ ಬೆಳಗಿನ ಜಾವ ಸೇತುವೆಯ ತಡೆಗೋಡೆಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ದಕ್ಷಿಣ ಕನ್ನಡ ಮೂಲದ ಯುವಕನ ಸಹಿತ ಮೂವರು ಮೃತಪಟ್ಟಿದ್ದಾರೆ.

Advertisement

ಮಂಗಳೂರು ಮೂಲದ ಚೇತನ್‌ (24), ಬೆಂಗಳೂರಿನ ಕೆ.ಆರ್‌.ಪುರದ ವಿನಯ್‌ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೂಬ್ಬ ಲಿಖೀತ್‌ (20) ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹೇಮಂತ್‌, ಲೋಹಿತ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಕಾರಿನಲ್ಲಿ ಐವರು ಯುವಕರು ಇದ್ದು, ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ. ಅತೀ ವೇಗದಿಂದ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಢಿಕ್ಕಿಯಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next