Advertisement

Kolar: ಮರಕ್ಕೆ ಕಾರು ಡಿಕ್ಕಿ; ಮೂವರು ಬಿಇ ವಿದ್ಯಾರ್ಥಿಗಳು ಸಾವು

09:13 PM Aug 03, 2024 | Team Udayavani |

ಕೋಲಾರ: ಆಡಿ ಕಾರು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯ ನಗರ ಹೊರವಲಯದ ಸಹಕಾರ ನಗರದ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.

Advertisement

ಬೆಂಗಳೂರಿನ ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳಾದ ಹಾಸನ ಮೂಲದ ಹರ್ಷವರ್ಧನ್‌ (21), ಬಳ್ಳಾರಿ ಮೂಲದ ಬಸವರಾಜ್‌ (21), ಬಂಗಾರಪೇಟೆಯ ನಿಶ್ಚಲ್‌ (21) ಮೃತಪಟ್ಟವರು. ಬಂಗಾರಪೇಟೆಯ ಸಾಯಿ ಗಗನ್‌ ಅಪಾಯದಿಂದ ಪಾರಾಗಿದ್ದಾರೆ.

ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾಯಿ ಗಗನ್‌ ಸೋದರಿ ಮದುವೆಯ ಆಮಂತ್ರಣ ಹಂಚಲು ಸ್ನೇಹಿತರು ಬಂಗಾರಪೇಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next